Sunday, November 14, 2010

ಒಲವೆಂಬ ಹೊತ್ತಿಗೆ

ಒಲವೆಂಬ ಹೊತ್ತಿಗೆ

ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು

ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ

ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆ ವೆಚ್ಚ!

ಬೆವರ ಹನಿಯಲಿ ಹಲವು ಕಣ್ಣೀರಿನಲಿ ಕೆಲವು

ನೆತ್ತರರಲಿ ಬರೆದುದಕೆ ಲೆಕ್ಕವಿಲ್ಲ

ಚಿತ್ರಚಿತ್ರಾಕ್ಷರದ ಲಕ್ಷಪತ್ರಗಳುಂಟು

ನಕ್ಷತ್ರ ಮರೆತು ಓದುತಿವೆ ಮರೆತು ಸೊಲ್ಲ

ಏನಿಹುದೋ ಎಂತಿಹುದೋ ಸಂಸಾರ ಸಾರ

ಕಂಡವರು ಯಾರು ಅದರ ಅಂತಃಪಾರ

ಹೃದಯ ಸಂಪುಟದಲ್ಲಿ ಒಲವ ಲೆಕ್ಕಣಿಕೆ

ಮಾಡಿ ಬರೆಯಲೋ ಹುಡುಗ ನಿನ್ನ ಒಕ್ಕಣಿಕೆ

-ಅಂಬಿಕಾತನಯದತ್ತ

ಪ್ರೀತಿ!...

ಈ ಎರಡು ಶಬ್ಧವನ್ನು ಕೇಳುತ್ತಿರುವಂತೆಯೇ ಅದೇನು ಪುಳಕ!

ನಮ್ಮ ಕವಿಗಳು, ಕಥೆಗಾರರು, ಕಾದಂಬರೀಕಾರರು ಸಾವಿರಾರು ವರ್ಷಗಳಿಂದ ಈ ಪ್ರೀತಿ ಎಂದರೆ ಏನು ಎಂಬುದನ್ನು ಶಬ್ಧಗಳಲ್ಲಿ ತಿಳಿಸಲು ಹೆಣಗಾಡಿರುವರು. ಆದರೂ ನಮಗೆ ಪ್ರೀತಿಯ ಸಾಕ್ಷಾತ್ಕಾರವಾಗಿಲ್ಲ. ಅಂಬಿಕಾತನಯದತ್ತರ ಮಾತನ್ನು ನಂಬುವುದಾದರೆ, ಪ್ರೀತಿಯ ಒಡಲಾಳವನ್ನು ಅರಿಯುವುದಂತಿರಲಿ, ಹಗಲಿರುಳು ದುಡಿದರೂ, ಹಲವು ಜನ್ಮಗಳನ್ನು ಕಳೆದರೂ, ಪ್ರೀತಿಗೆ ಅಗತ್ಯವಾದ ಅಂಚೆ ವೆಚ್ಚವನ್ನು ಸಂಪಾದಿಸಲು ನಮ್ಮಿಂದ ಆಗುವುದಿಲ್ಲವಂತೆ!

ಪ್ರೀತಿ ಎನ್ನುವುದು ಅಷ್ಟು ಹಿರಿದೆ? ಅಷ್ಟು ನಿಗೂಢವೆ!?

ಏನು ಹೇಳುತ್ತದೆ ಪ್ರೀತಿಯ ಬಗ್ಗೆ ನಮ್ಮ ವಿಜ್ಞಾನ?

ಬಗೆ ಬಗೆ:

ಪ್ರೀತಿಯ ಆಳ ಹಾಗೂ ವ್ಯಾಪ್ತಿ ದೊಡ್ಡದು. ನಮ್ಮ ಸಮಾಜದಲ್ಲಿ ನಾವು ಹಲವು ರೀತಿಯ ಪ್ರೀತಿಯನ್ನು ಕಾಣುತ್ತೇವೆ.

ತಾಯಿ ತನ್ನ ಮಗುವನ್ನು ಪ್ರೀತಿಸುತ್ತಾಳೆ.

ಅಣ್ಣ ತನ್ನ ತಂಗಿಯನ್ನು ಪ್ರೀತಿಸುತ್ತಾನೆ.

ಹುಡುಗ ಹುಡುಗಿಯನ್ನು ಪ್ರೀತಿಸುತ್ತಾನೆ

ವಿಟ ವೇಶ್ಯೆಯ ಜೊತೆ ಸಂಭೋಗ ನಡೆಸುತ್ತಾನೆ

ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ.

ಅಕ್ಕ ಮಹಾದೇವಿ ಮಲ್ಲಿಕಾರ್ಜುನನನ್ನು ಪ್ರೀತಿಸುತ್ತಾಳೆ; ಹೆಳವನಕಟ್ಟೆ ಗಿರಿಯಮ್ಮ, ಮೀರಾ ಕೃಷ್ಣನನ್ನು ಪ್ರೀತಿಸುತ್ತಾರೆ....ಬೀಬಿ ನಾಂಚಾರಿ ಚೆಲುವನಾರಾಯಣನನ್ನು ಪ್ರೀತಿಸುತ್ತಾಳೆ!

ಕೆಲವು ಸಂಸ್ಕೃತಿಗಳಲ್ಲಿ ಹತ್ತು ವಿಧಕ್ಕೂ ಹೆಚ್ಚಿನ ಪ್ರೀತಿಯನ್ನು ಕಾಣಬಹುದಂತೆ!



ಪ್ರಸ್ತುತ ನಾವು ಹುಡುಗ-ಹುಡುಗಿಯ ನಡುವಿನ ಪ್ರೇಮದ ಪರಿಯನ್ನಷ್ಟೇ ನೋಡೋಣ.

ಪ್ರೀತಿಯನ್ನು ಅಧ್ಯಯನ ಮಾಡುವ ವಿಜ್ಞಾನ ಶಾಖೆಯಿನ್ನೂ ಅಂಕುರವೊಡೆಯುತ್ತದೆ. ಈ ಶಾಖೆಗೆ ಇನ್ನೂ ಶಾಸ್ತ್ರೀಯವಾಗಿ ನಾಮಕರಣವಾಗಬೇಕಿದೆ. ಆದರೆ ವಿಜ್ಞಾನಿಗಳು ಪ್ರೀತಿಯ ವೈಜ್ಞಾನಿಕ ವಿವರಣೆಯನ್ನು ಆಗಲೇ ಹುಡುಕಲಾರಂಭಿಸಿದ್ದಾರೆ. ಪ್ರೀತಿಯ ಭಿನ್ನ ಸ್ವರೂಪಗಳಿಗೆ ಕಾರಣವನ್ನು ತಿಳಿಯಲು ಮಾನವನ ಮಿದುಳಿನೊಳಗೆ ಇಣುಕಿ ನೋಡುತ್ತಿದ್ದಾರೆ. ಪ್ರೀತಿಯ ನೂರು ಮುಖದಲ್ಲಿ ಯಾವ ಯಾವ ರಾಸಾಯನಿಕಗಳು ಪಾಲುಗೊಳ್ಳುತ್ತವೆ? ಅವು ಹೇಗೆ ಬದಲಾಗುತ್ತವೆ? ಏಕಾಗುತ್ತವೆ? ಪ್ರೀತಿಯಲ್ಲಿ ಸಂಗಾತಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು? ಎಲ್ಲ ಪ್ರೀತಿಯು ಏಕೆ ಸುಖಾಂತ್ಯವಾಗುವುದಿಲ್ಲ? ಪ್ರೀತಿಯ ವೈಫಲ್ಯಕ್ಕೆ ಕಾರಣಗಳೇನು?...ಈ ಪ್ರೀತಿ ಎನ್ನುವುದು ಜೀವ ವಿಕಾಸದಲ್ಲಿ ಬೆಳೆದು ಬಂದ ಪರಿ ಎಂತಹದ್ದು? ಈ ಎಲ್ಲ ಚಿರಕಾಲದ ಪ್ರಶ್ನೆಗಳಿಗೆ ವೈಜ್ಞಾನಿಕ ವಿವರಣೆಯನ್ನು ಹುಡುಕುತ್ತಾ, ಆಳವಾಗಿ ನಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇವೆ.

ಸಂಚು:

ಪ್ರೀತಿ ಎನ್ನುವುದು ಪ್ರಕೃತಿಯು ಹೂಡಿದ ಸಂಚು. ಉತ್ತಮ ಗುಣ ಲಕ್ಷಣಗಳನ್ನು ಹೊಂದಿರುವ ಹುಡುಗ ಮತ್ತು ಒಟ್ಟಿಗೆ ಬರಲಿ; ಸಂತಾನ ವರ್ಧನಾ ಕಾರ್ಯದಲ್ಲಿ ಪಾಲುಗೊಳ್ಳಲಿ; ಉತ್ತಮ ಸಂತಾನವನ್ನು ಸೃಜಿಸಲಿ-ಇದು ಪ್ರಕೃತಿಯ ಏಕಮಾತ್ರ ಹೆಬ್ಬಯಕೆ. ಪ್ರೀತಿ-ಪ್ರೇಮ-ಕಾಮಗಳ ಹಿಂದಿರುವ ಘನ ಉದ್ದೇಶ ಉತ್ತಮ ಸಂತಾನ ವರ್ಧನೆ ಮಾತ್ರ!

ಏನಾಗುತ್ತದೆ?

ಹುಡುಗ ಹುಡುಗಿಯರು ಒಬ್ಬರನ್ನೊಬ್ಬರು ನೋಡುತ್ತಾರೆ. ಕಣ್ಣು ಕಣ್ಣು ಕಲೆಯುತ್ತವೆ. ಕಲೆಯುತ್ತಿರುವಂತೆಯೇ ಅವರ ಮನಸ್ಸು-ಮಿದುಳಿನಲ್ಲಿ ಅಸಂಖ್ಯ ರಾಸಾಯನಿಕಗಳು ಉತ್ಪಾದನೆಯಾಗುತ್ತವೆ. ಮಿದುಳಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಿಯುತ್ತವೆ. ಮಿದುಳಿನಿಂದ ದೇಹದ ವಿವಿಧ ಅಂಗಗಳಿಗೆ ನರಸಂಜ್ಞೆಗಳು ಸಾಗುತ್ತವೆ. ಪಂಚೇಂದ್ರಿಯಗಳು ಮತ್ತಷ್ಟು ಮಾಹಿತಿಯನ್ನು ಮಿದುಳಿಗೆ ಕಳುಹಿಸುತ್ತವೆ. ಮಿದುಳು ಮತ್ತೆ ನರ ರಸಾಯನಿಕಗಳನ್ನು ಉತ್ಪಾದಿಸಿ ಹರಿಸುತ್ತವೆ...

ನಮಗೆ ಎಲ್ಲವೂ ಗೋಜಲು ಗೋಜಲು. ಆದರೆ ಮಿದುಳು ಮಾತ್ರ ಎಲ್ಲ ಕೆಲಸವನ್ನು ಕ್ರಮಬದ್ಧವಾಗಿ ಹಾಗೂ ಕರಾರುವಾಕ್ಕಾಗಿ ಮಾಡುತ್ತಾ ನಡೆಯುತ್ತದೆ. ಆದರೆ...ಮಿದುಳು ಏನು ಕೆಲಸ ಮಾಡುತ್ತದೆ???

ಮಿದುಳಿನಲ್ಲಿ ಏನಾಗುತ್ತದೆ?

ಲವ್ ಅಟ್ ಫಸ್ಟ್ ಸೈಟ್!

ಒಬ್ಬ ಹುಡುಗ-ಹುಡುಗಿಯರಲ್ಲಿ ಪರಸ್ಪರ ಪ್ರೀತಿ ಮೊಳೆಯುವುದೇ ಇಲ್ಲವೇ ಎಂಬುದು ನಿರ್ಧಾರವಾಗಲು ಒಂದೂವರೆ ನಿಮಿಷದಿಂದ ನಾಲ್ಕು ನಿಮಿಷಗಳ ಕಾಲ ಸಾಕಾಗುತ್ತದೆಯಂತೆ! ಅಂದರೆ ನಮ್ಮ ಕವಿಗಳು ಹೇಳುವ ಹಾಗೆ ‘ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತದೆ‘ ಎನ್ನುವ ಹೇಳಿಕೆ ಸುಳ್ಳಿರಲಾರದು. ಅದು ಕವಿಯ ಕಲ್ಪನೆಯಾಗಿರಲಾರದು. ಅತಿ ರಂಜಿತ ವಿವರಣೆಯೂ ಆಗಿರಲಾರದು. ಅದರಲ್ಲಿ ಸತ್ಯ ಇರಲೇಬೇಕು!

ಹುಡುಗ-ಹುಡುಗಿಯರು ಚಲನಚಿತ್ರದಲ್ಲಿ ‘ಐ ಲವ್ ಯು ಎಂದು ಹೇಳುವ ಮೂಲಕ ಪರಸ್ಪರ ಪ್ರೀತಿಸುತ್ತಿರುವುದನ್ನು ಹೇಳಬಹುದು. ಆದರೆ ನಿಜ ಜೀವನದಲ್ಲಿ ಯಾರಾದರೂ ಹೀಗೆ ಹೇಳುತ್ತಾರೆಯೆ ಎಂಬುದರ ಬಗ್ಗೆ ನನಗೆ ಅನುಮಾನವಿದೆ. ಅಂತಹ ಪ್ರಕರಣಗಳು ಅಪರೂಪವೆಂದೇ ನನ್ನ ಭಾವನೆ. ಪ್ರೀತಿಯ ಅರುಣೋದಯವಾಗಿರುವುದನ್ನು ಮಾತಿಗಿಂತ ಇತರ ಲಕ್ಷಣಗಳು ಸೂಚಿಸುತ್ತವೆ ಎಂದು ಅನಿಸುತ್ತದೆ. ಈ ವಿಷಯದಲ್ಲಿ ವಿಜ್ಞಾನಿಗಳು ನೀಡುವ ಅಂಕಿ-ಅಂಶಗಳನ್ನು ನೋಡಿ.

ಪ್ರೇಮಿಗಳ ಪ್ರೀತಿಯ ಬಗ್ಗೆ ೫೫% ರಷ್ಟು ಮಾಹಿತಿಯನ್ನು ದೈಹಿಕ ಹಾವ-ಭಾವಗಳು ತಿಳಿಸುತ್ತವೆಯಂತೆ.

೩೮% ರಷ್ಟು ಮಾಹಿತಿಯನ್ನು ಧ್ವನಿ, ಧ್ವನಿಯಲ್ಲಿರುವ ಭಾವ ಹಾಗೂ ಮಾತನಾಡುವ ವೇಗ ನಿರ್ಧರಿಸುತ್ತದೆಯಂತೆ.

ಪ್ರೀತಿಯು ಕೇವಲ ೭% ರಷ್ಟು ಮಾತ್ರ ಮಾತಿನ ಮೂಲಕ ರವಾನೆಯಾಗುವುದಂತೆ.

ಮೂರು ಹಂತಗಳು:

ಪ್ರೀತಿಯು ಮೂರು ಹಂತಗಳಲ್ಲಿ ಬೆಳೆಯುತ್ತದೆ ಎನ್ನುತ್ತಾರೆ ಅಮೆರಿಕದ ರುಟ್ಗರ್ಸ್ ವಿಶ್ವವಿದ್ಯಾಲಯದ ಶ್ರೀಮತಿ ಹೆಲೆನ್ ಫಿಶರ್. ಆ ಮೂರು ಹಂತಗಳು ಕಾಮತೃಷೆ (ಲಸ್ಟ್), ಆಕರ್ಷಣೆ (ಅಟ್ರಾಕ್ಷನ್) ಮತ್ತು ಭಾವಾನುಬಂಧ (ಅಟಾಚ್‌ಮೆಂಟ್).

ಹಂತ ೧: ಕಾಮತೃಷೆ:

ಒಬ್ಬ ಹುಡುಗ ಒಂದು ಹುಡುಗಿಯನ್ನು ನೋಡಿದಾಗ, ಒಬ್ಬ ಹುಡುಗಿ ಒಂದು ಹುಡುಗನನ್ನು ನೋಡಿದಾಗ, ಇವನು/ಇವಳು ನನಗೆ ಸಮರ್ಥವಾದ ಸಂತಾನವನ್ನು ನೀಡಬಲ್ಲನೆ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಹಾದುಹೋಗುತ್ತದೆ. ಇಂತಹ ಭಾವನೆ ಇಬ್ಬರ ಮನಸ್ಸಿನಲ್ಲಿ ಮೂಡುವಾಗ, ಯಾವುದೇ ಪ್ರೀತಿಯ ಸೋಂಕಿರುವುದಿಲ್ಲ. ಇಲ್ಲಿ ಕೇವಲ ಕೇವಲ ಕಾಮತೃಷೆ ಮಾತ್ರ ಇರುತ್ತದೆ. ಈ ಭಾವನೆ ಎಲ್ಲಾ ಅಪರಿಚಿತ ಗಂಡು-ಹೆಣ್ಣುಗಳಲ್ಲಿ ಸಹಜವಾಗಿ ಮೂಡುತ್ತದೆ. ಇಂತಹ ಭಾವನೆ ಮೂಡಲು ಸ್ತ್ರೀಲಕ್ಷಣವರ್ಧಕ ಹಾರ್ಮೋನುಗಳು (ಈಸ್ಟ್ರೋಜನ್ಸ್) ಹಾಗೂ ಪುರುಷಲಕ್ಷu ವರ್ಧಕ ಹಾರ್ಮೋನುಗಳೆರಡೂ ಕಾರಣವಾಗಿರುತ್ತವೆ.

ಹಂತ ೨: ಆಕರ್ಷಣೆ:

ಹುಡುಗ-ಹುಡುಗಿಯರು ಒಬ್ಬರನ್ನೊಬ್ಬರು ನೋಡಲು-ಮಾತನಾಡಲು ಸ್ವಲ್ಪ ಅವಕಾಶ ದೊರೆತರೆ ಸಾಕು, ಎರಡನೆಯ ಹಂತ ಆರಂಭವಾಗುತ್ತದೆ. ಈ ಹಂತವು ರೂಪುಗೊಳ್ಳಲು ಒಂದೂವರೆ ನಿಮಿಷದಿಂದ ನಾಲ್ಕು ನಿಮಿಷಗಳು ಸಾಕು. ಈ ಅವಧಿಯಲ್ಲಿ ನಾಲ್ಕು ಪ್ರಮುS ಹಾರ್ಮೋನುಗಳು ಪಾಲುಗೊಳ್ಳುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಆ ಹಾರ್ಮೋನುಗಳೇ ಅಡ್ರಿನಾಲಿನ್, ಕಾರ್ಟಿಸಾಲ್, ಡೋಪಮಿನ್ ಹಾಗೂ ಸೆರಟೋನಿನ್.

ಅಡ್ರಿನಾಲಿನ್: ನಿಮ್ಮ ಮೆಚ್ಚಿನ ಸಂಗಾತಿಯನ್ನು ನೋಡಿದ ಕೂಡಲೇ ಅಥವ ನಮ್ಮ ಚಲನಚಿತ್ರಗಳಲ್ಲಿ ತೋರಿಸುವ ಹಾಗೆ ನಾಯಕ-ನಾಯಕಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುತ್ತಲೇ, ಒಂದು ವಿವರಿಸಲಾಗದಂತಹ ಒತ್ತಡ (ಸ್ಟ್ರೆಸ್) ಇಬ್ಬರಲ್ಲೂ ಮೂಡುತ್ತದೆ. ಒತ್ತಡ ಮೂಡುತ್ತಿರುವಂತೆಯೇ ಒತ್ತಡ ಹಾರ್ಮೋನುಗಳಾದ ಅಡ್ರಿನಾಲಿನ್ ಹಾಗೂ ಕಾರ್ಟಿಸಾಲ್ ಒಮ್ಮೆಲೆ ಬಿಡುಗಡೆಯಾಗುತ್ತವೆ. ನಿಮಗರಿವಿಲ್ಲದಂತೆಯೇ ನೀವು ಬೆವರುತ್ತೀರಿ. ಎದೆ ಡವ ಡವ ಎಂದು ಹೊಡೆದುಕೊಳ್ಳುತ್ತದೆ. ಬಾಯಿ ಒಣಗುತ್ತದೆ. ಮಾತು ಹೊರಡುವುದಿಲ್ಲ. ಹೊರಟರೂ ತೊದಲುತ್ತದೆ...ಇವೆಲ್ಲವೂ ಸಹಾ ಅಡ್ರಿನಾಲಿನ್ ಹಾರ್ಮೋನಿನ ಲೀಲೆ!

ಡೋಪಮಿನ್: ಓ ನನ್ನ ಸಖಿ! ನಿನಗೇನು ಬೇಕು ಹೇಳು? ಭೂಮ್ಯಾಕಾಶಗಳನ್ನು ಒಂದು ಮಾಡಲೇ, ಬಾನಿನಲ್ಲಿರುವ ತಾರೆಗಳ ಕಿತ್ತು ತರಲೆ? ಏಳು ಸಮುದ್ರಗಳ ದಾಟಿ ಅಲ್ಲಿ ನಿನಗಾಗಿ ಅರಳಿರುವ ಗುಲಾಬಿಯನ್ನು ಕೊಯ್ದು ತರಲೆ?...ಹೀಗೆಲ್ಲ ಪ್ರೀತಿಗೆ ತುತ್ತಾದವರು ಮಾತನಾಡುತ್ತರಂತೆ! ಅಣ್ಣಾವರು ಹಾಡಿದ ಹಾಗೆ ‘ಅಕಾಶವೇ ಬೀಳಲಿ ಮೇಲೆ, ನಾನೆಂದು ನಿನ್ನವನು ಎಂದು ಹಾಡಿದರೂ ಹಾಡಬಹುದು. ಹೀಗೆ ಹಾಡುವಂತೆ-ಮಾತನಾಡುವಂತೆ ಪ್ರಚೋದನೆಯನ್ನು ನೀಡುತ್ತದೆ ಡೋಪಮಿನ್ ಹಾರ್ಮೋನ್! ಪ್ರೀತಿಸುವ ಎಳೇ ಜೀವಗಳಿಗೆ ಈ ಜಗವನ್ನೇ ಎದುರಿಸಿ ನಿಲ್ಲುವ ಧೈರ್ಯ ಬರುತ್ತದೆ. ಧರ್ಮ, ಜಾತಿ, ಪಂಗಡ, ಭಾಷೆ, ಅಪ್ಪ, ಅಮ್ಮ, ಹಣ, ಆಸ್ತಿ, ಅಂತಸ್ತು ಎಲ್ಲವನ್ನೂ ಧಿಕ್ಕರಿಸಿ ನಡೆಯುವ ಕೆಚ್ಚು ಬರುತ್ತದೆ. ಈ ಎಲ್ಲವನ್ನು ಡೋಪಮಿನ್ ಕೊಡುತ್ತದೆ. ಹೆಲೆನ್ ಫಿಶರ್ ಅವರು ಪ್ರೀತಿಯ ಎರಡನೆಯ ಹಂತದಲ್ಲಿದ್ದ ಹಲವು ಪ್ರೇಮಿಗಳನ್ನು ಕರೆದು ಅವರ ಮಿದುಳನ್ನು ಅಧ್ಯಯನ ಮಾಡಿದರು. ಇವರಲ್ಲಿ ಡೋಪಮಿನ್ ಜನಸಾಮಾನ್ಯರಿಗಿಂತ ಅಧಿಕವಾಗಿತ್ತು. ಮಿದುಳಿನ ತುಂಬಾ ಡೋಪಮಿನ್ನಿನದೇ ಕಾರುಬಾರು! ಈ ರಾಸಾಯನಿಕವು ನಮ್ಮಲ್ಲಿ ಆಸೆಯನ್ನು ಹುಟ್ಟಿಸಿ, ಆಸೆಯನ್ನು ಪೂರೈಸಿಕೊಂಡು ತೃಪ್ತಿಯನ್ನು ಅನುಭವಿಸಲು (ಡಿಸೈರ್-ರಿವಾರ್ಡ್) ಹಾತೊರೆಯುತ್ತದೆ! ಸುಖವನ್ನು ನೀಡುತ್ತದೆ. ಹಾಗಾಗಿ ತೃಪ್ತಿಯ ಸುಖಾನುಭಾವವನ್ನು ಪಡೆಯಲು ಆಕಾಶದಲ್ಲಿರುವ ನಕ್ಷತ್ರಗಳನ್ನು ಕಿತ್ತು ತರಲು (ಅಂದರೆ ಎಂತಹ ಮೋಡು-ಬಂಡು ಸಾಹಸ ಮಾಡಲು) ಸಿದ್ಧವಾಗಿಸುತ್ತದೆ!

ಸೆರಟೋನಿನ್: ‘ಒಲವಿನಾ ಪ್ರಿಯಲತೆ...ಅವಳದೇ ಚಿಂತೆ...ಅವಳ ಮಾತೆ..ಮಧುರ ಗೀತೆ...ಅವಳೆ ಎನ್ನಾ ದೇವತೆ!‘...ಪ್ರೀತಿ ಪ್ರೇಮದಲ್ಲಿ ಬಿದ್ದವರಿಗೆ ವಿರಹ ಅನಿವಾರ್ಯ. ವಿರಹಾ ನೂರು ನೂರು ತರಹ... ಪ್ರೇಮಿಗಳು ತಮ್ಮ ಸಂಗಾತಿಯನ್ನೆ ಮತ್ತೆ ಮತ್ತೆ ನೆನಪಿಸಿಕೊಂಡು, ಸಾನಿಧ್ಯಕ್ಕೆ ಹಾತೊರೆಯುವಂತೆ ಮಾಡುವ ಅಪರೂಪದ ಹಾರ್ಮೋನು ಈ ಸೆರಟೋನಿನ್! ಸಂಗಾತಿಯನ್ನು ಮರೆಯಗೊಡದೇ ಪದೇ ಪದೇ ನೆನಪಿಸುವಂತೆ ಮಾಡುವ ಈ ಹಾರ್ಮೋನನ್ನು ಪ್ರೇಮಿಗಳು ಅದೆಷ್ಟು ಹೊಗಳುತ್ತಾರೋ...ಅದೆಷ್ಟು ತೆಗಳುತ್ತಾರೋ! ಸೆರಟೋನಿನ್ ಪ್ರಮಾಣ, ಜನ ಸಾಮಾನ್ಯರ ಮಿದುಳಿನಲ್ಲಿರುವ ಪ್ರಮಾಣಕ್ಕಿಂತ, ಪ್ರೇಮಿಗಳಲ್ಲಿ ಕಡಿಮೆಯಾದಾಗ ಇಂತಹ ಸವಿನೆನಪಿನ ಭಾವನೆಗಳು ಕಾಡುತ್ತವೆ. ಚಂದ್ರನ ತಂಬೆಳದಿಂಗಳೂ ಸಹಾ ಕಾದು ಸುಡುವ ಬಿರುಬಿಸಿಲಿನ ಅನುಭವವನ್ನು ತರುತ್ತದೆ.

ಹುಚ್ಚು:

ಪ್ರೀತಿಯೆನ್ನುವುದು ದ್ವಿಮುಖವಾಗಿದ್ದಾಗ ಎಲ್ಲವೂ ಚೆನ್ನಾಗಿರುತ್ತದೆ. ಜೋಡಿಗಳು ತಮ್ಮದೇ ಆದ ಜಗತ್ತಿನಲ್ಲಿ ವಿಹರಿಸುತ್ತಾ ಮೈ ಮರೆಯುತ್ತಾರೆ. ಇದೇ ಪ್ರೀತಿ ಏಕಮುಖವಾಗಿದ್ದಾಗ, ಹುಡುಗ ಅಥವ ಹುಡುಗಿಯಲ್ಲಿ ಮಾತ್ರ ಕಾಣಿಸಿಕೊಂಡಾಗ-ಸಂಗಾತಿಯ ಬಳಿ ಹೋಗಿ ‘ಐ ಲವ್ ಯು‘ ಎಂದಾಗ ‘ಏನು? ನೀನು ಪ್ರೀತಿಸ್ತೀಯ...ನಿನಗೇನು ಹುಚ್ಚು ಹಿಡಿದಿ ತಾನೇ‘ ಎಂದು ಪ್ರಶ್ನೆ ಕೇಳಿದಾಗ, ಪ್ರೀತಿ ಎನ್ನುವುದು ನಿಜಕ್ಕೂ ಹುಚ್ಚೇ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಏಳುತ್ತದೆ.

ಹೌದು. ಪ್ರೀತಿ ಎನ್ನುವುದು ಹುಚ್ಚು. ಕೇವಲ ಹುಚ್ಚು ಮಾತ್ರವಲ್ಲ, ಅದೊಂದು ಗೀಳು ಹೌದು. ಪ್ರೀತಿಯು ಅಬ್ಸಸಿವ್ ಕಂಪಲ್ಸಿವ್ ಡಿಸಾರ್ಡರ್ ಎಂಬ ಗೀಳು ರೋಗವನ್ನು ಹೋಲುತ್ತದೆ.

ಡಾ.ಡೊನಟೆಲ್ಲ ಮರಾಜ಼್ಜಿತಿ ಅವರು, ಇಟಲಿಯ ಪೀಸಾ ವಿಶ್ವವಿದ್ಯಾನಿಲಯದಲ್ಲಿ ಮನೋವೈದ್ಯರಾಗಿ ಕೆಲಸ ಮಾಡುತ್ತಿರುವರು. ಇವರು ಪ್ರೀತಿಯ ಎರಡನೆಯ ಹಂತದಲ್ಲಿದ್ದ ೨೦ ಜೋಡಿಗಳನ್ನು ಕರೆದರು. ಈ ಜೋಡಿಗಳು ಪ್ರೀತಿಯ ಎರಡನೆಯ ಹಂತದಲ್ಲಿ ೬ ತಿಂಗಳ ಕಾಲವನ್ನಷ್ಟೇ ಕಳೆದಿದ್ದರು. ಹಾಗಾಗಿ ಇವರು ತಮ್ಮ ಸಂಗಾತಿಯನ್ನು ಪದೇ ಪದೇ ನೆನಪಿಸಿಕೊಂಡು, ವಿರಹವನ್ನು ಅನುಭವಿಸುತ್ತಾ, ಪ್ರೀತಿಯ ನೊವಿನ ಮುಖವನ್ನು ಸವಿಯುತ್ತಾ, ಕಾಲ ಕಳೆಯುತ್ತಿದ್ದರು.

ಗೀಳು ರೋಗಕ್ಕೆ ತುತ್ತಾದವರು, ಒಂದು ನಿರ್ದಿಷ್ಟ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾರೆ. ಉದಾಹರಣೆಗೆ ಕೈ ತೊಳೆಯುವ ಗೀಳು. ಈ ಗೀಳಿಗೆ ತುತ್ತಾದವರು ತಮ್ಮ ಕೈಗಳನ್ನು ಪದೇ ಪದೇ ತೊಳೆಯುತ್ತಾರೆ. ಎಷ್ಟು ಸಲ ಸೋಪು ಹಾಕಿ ತೊಳೆದರೂ ಅವರಿಗೆ ಸಮಾಧಾನವಿರುವುದಿಲ್ಲ. ದಿನಕ್ಕೆ ಹತ್ತಲ್ಲ ಇಪ್ಪತ್ತಲ್ಲ ಐವತ್ತು ಅರವತ್ತು ಬಾರಿಯಾದರೂ ಕೈಗಳನ್ನು ತೊಳೆಯುತ್ತಲೇ ಇರುತ್ತಾರೆ. ಸಂಪ್ರದಾಯಸ್ತ ಮನೆಯಲ್ಲಿ ಹುಟ್ಟಿದ ಓರ್ವ ಗೃಹಿಣಿಯನ್ನು ಕೈಯನ್ನು ಪರಪುರುಷನೊಬ್ಬ ಹಿಡಿದೆಳೆದನು. ಪರಪುರುಷ ಮುಟ್ಟಿದ ತನ್ನ ಕೈ ‘ಅಪವಿತ್ರ‘ವಾಯಿತೆಂಬ ಭಾವನೆ ಆಕೆಗೆ. ತನ್ನ ಕೈಗಳನ್ನು ಪದೇ ಪದೇ ತೊಳೆದು ಪವಿತ್ರಗೊಳಿಸಲು ಆಕೆ ಪ್ರಯತ್ನಿಸುತ್ತಿರುತ್ತಾಳೆ. ಎಷ್ಟು ತೊಳೆದರೂ ಆಕೆಗೆ ಸಮಾಧಾನವಾಗದು. ಇಂತಹ ಗೀಳು ರೋಗಗಳಿಂದ ನರಳುವವರ ಮಿದುಳನ್ನು ಪರೀಕ್ಷಿಸಿದಾಗ ಅವರ ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣ ಸಾಮಾನ್ಯ ಜನರಿಗಿಂತ ಕಡಿಮೆಯಿತ್ತು. ವೈದ್ಯರು ಕೈ ತೊಳೆಯುವ ಗೀಳಿಗೆ ಕಡಿಮೆ ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣ ಕಡಿಮೆಯಾಗಿರುವೇ ಕಾರಣ ಎಂ ಬ ತೀರ್ಮಾನಕ್ಕೆ ಬಂದರು. ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣವನ್ನು ಹೆಚ್ಚಿಸುವಂತಹ ಔಷಧಗಳನ್ನು ನೀಡಿದರು. ಇದರಿಂದ ಗೀಳು ಕಡಿಮೆಯಾಗುವುದನ್ನು/ಪೂರ್ಣ ಗುಣವಾಗುವುದನ್ನು ಗಮನಿಸಿದರು.

ಡೊನಟೆಲ್ಲ ಅವರು ೨೦ ಜೋಡಿಗಳನ್ನು ಕರೆಸಿ ಅವರ ಮಿದುಳನ್ನು ಅಧ್ಯಯನ ಮಾಡಿದರು. ಅವರ ಮಿದುಳಿನಲ್ಲಿಯೂ ಸೆರಟೋನಿನ್ನಿನ ಪ್ರಮಾಣ, ಗೀಳುರೊಗಕ್ಕೆ ತುತ್ತಾಗಿದ್ದವರ ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣ ಎಷ್ಟಿತ್ತೋ ಸರಿಸುಮಾರು ಅಷ್ಟೇ ಪ್ರಮಾಣದಲ್ಲಿತ್ತು!

ಪ್ರೀತಿ ಕುರುಡು:

ಪ್ರೀತಿ ಕುರುಡು ಎನ್ನುವ ಮಾತಿದೆ. ಪ್ರೀತಿಯಲ್ಲಿ ತೇಲುತ್ತಿರುವವರು ಕುರುಡರು ಮಾತ್ರವಾಗಿರುವುದಿಲ್ಲ, ಕಿವುಡರೂ ಆಗಿರುತ್ತಾರೆ, ತಿಳಿಗೇಡಿಗಳೂ ಆಗಿರುತ್ತಾರೆ ಎಂದು ಹಿರಿಯರು ಗೊಣಗುವುದನ್ನು ನವು ಕೇಳಿದ್ದೇವೆ. ಇದು ವಾಸ್ತವದಲ್ಲಿ ನಿಜ. ಈ ಹಾರ್ಮೋನುಗಳು ಎಂತಹ ಮೋಡಿಯನ್ನು ಮಾಡಿರುತ್ತದೆಯೆಂದರೆ, ಹುಡುಗನಿಗೆ ತನ್ನ ಹುಡುಗಿಯಷ್ಟು ಸುಂದರಿ ಈ ಜಗತ್ತಿನಲ್ಲಿ ಮತ್ತೊಬ್ಬಳಿಲ್ಲ ಎನ್ನಿಸುತ್ತದೆ. ಹುಡುಗಿಗೆ, ತಮ್ಮದು ಜನ್ಮ ಜನ್ಮದ ಅನುಬಂಧ ಎಂದು ನಂಬಿಕೊಂಡಿರುತ್ತಾಳೆ. ಇಂತಹ ಸಂಗಾತಿ ದೊರೆತದ್ದು ತನ್ನ ಪೂರ್ವ ಜನ್ಮದ ಸುಕೃತ ಎಂದು ತಿಳಿದಿರುತ್ತಾರೆ. ತಾವು ‘ಮೇಡ್ ಫಾರ್ ಈಚ್ ಅದರ್‘ ಎಂದು ಭಾವಿಸಿರುತ್ತಾರೆ. ಸಂಗಾತಿಯಲ್ಲಿರುವ ಬೆಟ್ಟ ಗುಡ್ಡದಷ್ಟು ದೊಡ್ಡದಾದ ಅರೆಕೊರೆಗಳು ಅವರಿಗೆ ಕಾಣುವುದೇ ಇಲ್ಲ. ಸಾಸಿವೆಯಂತಹ ಸಣ್ಣ ಪುಟ್ಟ ಒಳ್ಳೆಯ ಗುಣಗಳು ಕುಂಬಳಕಾಯಿಯಷ್ಟು ದೊಡ್ಡದಾಗಿ ಕಾಣುತ್ತವೆ. ಆ ಗುಣಗಳನ್ನು ಅವರು ಹೊಗಳಿದ್ದೇ ಹೊಗಳಿದ್ದು!

ಪ್ರೇಮಿಗಳ ಮಿದುಳಿನಲ್ಲಿ ಸೆರಟೋನ್ನಿನ ಪ್ರಮಾಣ ಕಡಿಮೆಯಾಗಿ, ಎಲ್ಲೆಡೆ ಡೋಪಮಿನ್ ಹಾರ್ಮೋನಿನ ಸಾಮ್ರ್ಯಾಜ್ಯವೇ ನಡೆಯುತ್ತಿರುವ ಕಾರಣ, ಎಲ್ಲವೂ ಎಷ್ಟು ಸುಂದರವೆನಿಸುತ್ತದೆ. ಅವರಿಗೆ ಈ ಜಗತ್ತು ಸುಖಮಯವಾಗಿ ಕಾಣುತ್ತದೆ. ಈ ಅವಧಿಯಲ್ಲಿ ಮಿದುಳಿನ ತಾರ್ಕಿಕ ಭಾಗ, ಸಮಾಜದ ಕರಾಳ ಮುಖದ ಬಗ್ಗೆ ಎಚ್ಚರಿಕೆಯನ್ನು ನೀಡುವ ನೇತ್ಯಾತ್ಮಕ ಭಾಗ ಎಲ್ಲವೂ ಸದ್ದಿಲ್ಲದಂತೆ ನಿಗ್ರಹಗೊಂಡಿರುತ್ತವೆ.

ಪ್ರೀತಿಯ ಮೂರನೆಯ ಹಂತಕ್ಕೆ ಕಾಲಿಡಲು ಇಂತಹ ಭ್ರಮೆ ಅಗತ್ಯ!

ಹಂತ ಮೂರು: ಭಾವಾನುಬಂಧ:

ಪ್ರೀತಿಯಲ್ಲಿ ಮುಳುಗಿದ ಪ್ರೇಮಿಗಳು ಎರಡನೆಯ ಹಂತವನ್ನು ಪರಿಪೂರ್ಣವಾಗಿ ಕ್ರಮಿಸಿದ ನಂತರ ಮೂರನೆಯ ಹಂತಕ್ಕೆ ಕಾಲಿಡುತ್ತಾರೆ. ಸಾಂಪ್ರದಾಯಿಕ ಸಮಾಜದಲ್ಲಿ ಇದನ್ನು ‘ಮದುವೆ ಎನ್ನುತ್ತೇವೆ. ಆಧುನಿಕ ಸಮಾಜದಲ್ಲಿ ಇದು ‘ಲಿವ್ ಇನ್ ರಿಲೇಶನ್ ಶಿಪ್‘ ಆಗಬಹುದು ಅಥವ ಮತ್ತೊಂದಾಗಬಹುದು. ಒಟ್ಟಿನಲ್ಲಿ ಅವರು ಸಂತಾನವರ್ಧನೆಗೆ ಸಿದ್ಧರಾಗಿರುತ್ತಾರೆ.

ಜೋಡಿಯು ಪ್ರೇಮಿಗಳ ಪಟ್ಟದಿಂದ ಗೃಹಸ್ತ ಪಟ್ಟವನ್ನೇರಲು, ಮದುವೆಯಾಗಿ ಮಕ್ಕಳನ್ನು ಹೆರಲು, ಹೆತ್ತ ಮಕ್ಕಳನ್ನು ಸಮಾಜದ ಒಳ್ಳೆಯ ಪ್ರಜೆಗಳನ್ನಾಗಿ ಸಾಕಲು ನಮ್ಮ ದೇಹದಲ್ಲಿರುವ ಎರಡು ಹಾರ್ಮೋನುಗಳು ಪ್ರಧಾನ ಪಾತ್ರವಹಿಸುತ್ತವೆ ಎಂದು ಭಾವಿಸಲಾಗಿದೆ. ಆಕ್ಸಿಟೋಸಿನ್ ಮತ್ತು ವ್ಯಾಸೊಪ್ರೆಸ್ಸಿನ್ ಅವುಗಳ ಹೆಸರು.

ಆಕ್ಸಿಟೋಸಿನ್: ಇದೊಂದು ಶಕ್ತಿಶಾಲಿ ಹಾರ್ಮೋನು. ಇದು ಸ್ತ್ರೀ-ಪುರುಷರಿಬ್ಬರಲ್ಲೂ ಇರುತ್ತದೆ. ಸಂಭೋಗದ ಅಂತಿಮದಲ್ಲಿ ದೊರೆಯುವ ರತ್ಯಾನಂದಕ್ಕೆ (ಆರ್ಗಸಂ) ಈ ಹಾರ್ಮೋನೇ ಕಾರಣ. ಯಾವ ಜೋಡಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೋ, ಅವರು ಪದೇ ಪದೇ ಸಂಭೋಗದಲ್ಲಿ ತೊಡಗುತ್ತಾರೆ. ಆಗ ಅವರಲ್ಲಿ ಆಕ್ಸಿಟೋಸಿನ್ ಪದೇ ಪದೇ ಬಿಡುಗಡೆಯಾಗುತ್ತದೆ. ಆಕ್ಸಿಟೋಸಿನ್ ಕೇವಲ ಸಂಭೋಗಾವಧಿಯಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಎಂದರೆ ತಪ್ಪಾಗುತ್ತದೆ. ಸಂಗಾತಿಗಳು ಒಬ್ಬರನ್ನೊಬ್ಬರು, ಮುಟ್ಟಿದಾಗ, ಅಪ್ಪಿಕೊಂಡಾಗ, ಚುಂಬಿಸಿದಾಗಲೂ ಈ ಹಾರ್ಮೋನ್ ಬಿಡುಗಡೆಯಾಗುತ್ತದೆ. ಸಂಗಾತಿಯ ಭಾವಚಿತ್ರವನ್ನು ನೋಡುವಾಗಲೂ ಸಹ ಈ ಹಾರ್ಮೋನ್ ಬಿಡುಗಡೆಯಾಗಿ ಮಧುರ ಭಾವಗಳು ಹೊರಸೂಸಲು ಕಾರಣವಾಗುತ್ತದೆ. ಇದು ಜೋಡಿಗಳ ನಡುವೆ ಪ್ರೀತಿ-ನಂಬಿಕೆ-ವಿಶ್ವಾಸವನ್ನು ವರ್ಧಿಸುವ ಹಾರ್ಮೋನು. ಹೀಗೆ ಈ ಹಾರ್ಮೋನು ಜೋಡಿಗಳ ನಡುವೆ ದೀರ್ಘಕಾಲಿಕ ಅನುಬಂಧಕ್ಕೆ ಬುನಾದಿಯನ್ನು ಹಾಕುತ್ತದೆ. ಈ ಹಾರ್ಮೋನೇ ದೀರ್ಘಕಾಲದ ಯಶಸ್ವಿ ದಾಂಪತ್ಯದ ಗುಟ್ಟು. ಆಕ್ಸಿಟೋಸಿನ್ ಹಾರ್ಮೋನ್ ಪ್ರಸವಾವಧಿಯಲ್ಲಿ ಬಿಡುಗಡೆಯಾಗುತ್ತದೆ. ಇದನ್ನು ಪ್ರಸವೋತ್ಕರ್ಷಕ ಹಾರ್ಮೋನು ಎಂದೂ ಕರೆಯಬಹುದು. ಈ ಹಾರ್ಮೋನು ತಾಯಿ-ಮಗುವಿನ ಬಂಧವನ್ನು ಬಿಗಿಗೊಳಿಸುತ್ತದೆ. ತಾಯಿಯು ತನ್ನ ಮಗುವಿಗೆ ಪ್ರತಿ ಸಲ ಹಾಲನ್ನು ಕುಡಿಸುವಾಗ ಈ ಹಾರ್ಮೋನು ಉತ್ಪಾದನೆಯಾಗುತ್ತದೆ. ಇದರಿಂದ ತಾಯಿ-ಮಗುವಿನ ಬಂಧ ಬಲಗೊಳ್ಳುತ್ತಾ ಹೋಗುತ್ತದೆ. ಡಯಾನ್ ವಿಟ್ ಎಂಬ ನ್ಯೂಯಾರ್ಕಿನ ಮನಃಶಾಸ್ತ್ರ ಸಹ-ಪ್ರಾಧ್ಯಾಪಕರು ಇಲಿ ಹಾಗು ಕುರಿಗಳ ಮೇಲೆ ಒಂದು ಪ್ರಯೋಗವನ್ನು ಮಾಡಿದರು. ತಾಯಿ ಇಲಿ/ತಾಯಿ ಕುರಿಯ ಮಿದುಳಲ್ಲಿ ಆಕ್ಸಿಟೋಸಿನ್ ಉತ್ಪಾದನೆಯಾಗದಂತೆ ಕೃತಕವಾಗಿ ತಡೆಗಟ್ಟಿದರು. ಅದರ ಫಲವಾಗಿ ಇವು ತಮ್ಮ ಮರಿಗಳಿಗೆ ಹಾಲನ್ನು ಕುಡಿಸಲಿಲ್ಲ. ತಮ್ಮ ಮರಿಗಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಲಿಲ್ಲ. ತಾಯಿ ಇದ್ದೂ ಮರಿಗಳು ಅನಾಥವಾದವು. ಇವರು ಮತ್ತೊಂದು ಪ್ರಯೋಗವನ್ನು ಮಾಡಿದರು. ಎಂದೂ ಸಂಭೋಗದಲ್ಲಿ ತೊಡಗದ ಹೆಣ್ಣು ಇಲಿ/ಕುರಿಗೆ ಆಕ್ಸಿಟೋಸಿನ್ ಇಂಜಕ್ಷನ್ನನ್ನು ಕೃತಕವಾಗಿ ನೀಡಿದರು. ಆಗ ಆ ಇಲಿ-ಕುರಿಗಳು, ಇತರ ಇಲಿ-ಕುರಿಗಳು ಹೆತ್ತ ಸಂತಾನವನ್ನು ತನ್ನ ಸಂತಾನವೇನೋ ಎಂಬಂತೆ ಭಾವಿಸಿ, ಹೆತ್ತ ತಾಯಿಯಂತೆ, ಆ ಅನ್ಯ ಮರಿಗಳ ಆರೈಕೆ-ಕಾಳಜಿಯನ್ನು ವಹಿಸಿದವು. ಅಂದರೆ... ತಾಯ್ತನದ ಗುಟ್ಟು ಆಕ್ಸಿಟೋಸಿನ್ ಹಾರ್ಮೋನಿನಲ್ಲಿದೆ ಎಂದು ಹೇಳಬಹುದು.

ವ್ಯಾಸೋಪ್ರೆಸಿನ್: ಇದು ಜೋಡಿಗಳ ನಡುವಿನ ಅನುಬಂಧ ದೀರ್ಘಕಾಲ ಉಳಿಯಲು ನೆರವಾಗುವ ಮತ್ತೊಂದು ಪ್ರಮುಖ ಹಾರ್ಮೋನು. ಇದನ್ನು ಪ್ರತಿಮೂತ್ರಕಾರಕ ಹಾರ್ಮೋನು (ಆಂಟಿ ಡೈಯೂರೆಟಿಕ್ ಹಾರ್ಮೋನ್) ಎಂದು ಕರೆಯುವರು. ವ್ಯಾಸೋಪ್ರೆಸಿನ್ ಮೂತ್ರಪಿಂಡಗಳ ಮೇಲೆ ಪ್ರಭಾವವನ್ನು ಬೀರಿ, ಮೂತ್ರೋತ್ಪಾದನಾ ಪ್ರಮಾಣವನ್ನು ನಿಯಂತ್ರಿಸುತ್ತದೆ; ತನ್ಮೂಲಕ ನಮ್ಮ ದಾಹವನ್ನೂ ನಿಯಂತ್ರಿಸುತ್ತದೆ. ಇದು ಸಂಭೋಗದ ನಂತರ ಬಿಡುಗಡೆಯಾಗುತ್ತದೆ. ವ್ಯಾಸೋಪ್ರೆಸಿನ್-ನ ಮಹತ್ವವನ್ನು ತಿಳಿಯಲು ವಿಜ್ಞಾನಿಗಳು ಪ್ರೆಯರಿ ವೋಲ್ ಎಂಬ ಜೀವಿಗಳ ಮೇಲೆ ಪ್ರಯೋಗವನ್ನು ಮಾಡಿದರು. ಪ್ರೆಯರಿ ವೋಲ್ (ಮೈಕ್ರೋಟಸ್ ಓಕ್ರೋಗ್ಯಾಸ್ಟರ್) ಎನ್ನುವುದು ಮೂಷಕ ಜಾತಿಗೆ ಸೇರಿದ ಜೀವಿ. ನಮ್ಮ ಸಾಧಾರಣ ಇಲಿಗಿಂತ ದಪ್ಪಕ್ಕಿರುತ್ತದೆ. ಮೈಮೇಲಿನ ಕೂದಲು ಕಂದು ಬಣ್ಣಕ್ಕಿದ್ದರೆ, ಹೊಟ್ಟೆಯ ಕೆಳಗಿನ ಭಾಗ ಹಳದಿ ಬಣ್ಣಕ್ಕಿರುತ್ತದೆ. ಅಮೆರಿಕದಲ್ಲಿ ಹೆಚ್ಚು ಕಂಡುಬರುತ್ತದೆ. ವೋಲ್ ಸಂಘಜೀವಿ. ಅನೇಕ ಲಕ್ಷಣಗಳಲ್ಲಿ ಮನುಷ್ಯರನ್ನು ಹೋಲುತ್ತದೆ. ಒಂದು ಗಂಡು ವೋಲ್-ಒಂದು ಹೆಣ್ಣುಲ್ ತಮ್ಮ ಜೀವನ ಪರ್ಯಂತ ಸಂಗಾತಿಗಳಾಗಿರುತ್ತವೆ. ನಾವು ನಮ್ಮ ಬದುಕಲ್ಲಿ ನಮಗೆ ಅಗತ್ಯವಾದ ಎರಡು ಮಕ್ಕಳನ್ನು ಪಡೆಯಲು ಎರಡು ಸಲ ಸಂಭೋಗವನ್ನು ನಡೆಸಿದರೆ ಸಾಕಾಗುತ್ತದೆ ಅಲ್ಲವೆ! ಉಳಿದ ಎಲ್ಲ ಸಮಯದಲ್ಲಿ ನಾವು ಸಂಭೋಗವನ್ನು ಮಾಡುವುದು ರತ್ಯಾನಂದಕ್ಕೋಸ್ಕರ! ನಮ್ಮ ಹಾಗೆಯೇ ಈ ವೋಲುಗಳೂ ಸಹ ಸಂತಾನಕ್ಕೆ ಅಗತ್ಯವಾದ ಪ್ರಮಾಣಕ್ಕಿಂತ ಹೆಚ್ಚು ಕಾಲ ಸಂಭೋಗದಲ್ಲಿ ತೊಡಗುತ್ತವೆ. ಸುಖಕ್ಕಾಗಿಯೇ ಸಂಭೋಗವನ್ನು ನಡೆಸುತ್ತವೆ. ಹೆಣ್ಣು ಗರ್ಭ ಕಟ್ಟಿದಾಗ, ಎರಡೂ ಒಟ್ಟಿಗೆ ಗೂಡನ್ನು ಕಟ್ಟುತ್ತವೆ. ಒಟ್ಟಿಗೆ ತಮ್ಮ ಮನೆಯನ್ನು (ಪ್ರದೇಶವನ್ನು) ಕಾಯುತ್ತವೆ. ಅಗುಂತಕರಿಗೆ ಪ್ರವೇಶಿಸಲು ಅವಕಾಶವನ್ನು ಮಾಡಿಕೊಡುವುದಿಲ್ಲ. ಹೆತ್ತ ಮರಿಗಳನ್ನು ಗಂಡು-ಹೆಣ್ಣು ಒಟ್ಟಿಗೆ ಸಾಕುತ್ತವೆ. ಬೆಳೆಸುತ್ತವೆ. ಹಾಗಾಗಿ ಇವುಗಳ ಬದುಕು ಬಹುಪಾಲು ಮನುಷ್ಯರ ಬದುಕನ್ನು ಹೋಲುತ್ತವೆ ಎನ್ನಬಹುದು. ವಿಜ್ಞಾನಿಗಳು ಒಂದು ಪ್ರಯೋಗವನ್ನು ಮಾಡಿದರು. ಗಂಡು ವೋಲ್‌ಗಳನ್ನು ಹಿಡಿದು ಅವುಗಳಿಗೆ ವ್ಯಾಸೋಪ್ರೆಸಿನ್ ನಿರ್ಬಂಧಕ ಚುಚ್ಚುಮದ್ದನ್ನು ನೀಡಿದರು. ಆ ಕ್ಷಣವೇ ಗಂಡು ತನ್ನ ಸಂಗಾತಿಯನ್ನು ಬಿಟ್ಟು ಬಿಟ್ಟಿತು. ಸಂಗಾತಿಯ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಸದಾ ಕಾಲಕ್ಕೂ ಮರೆತುಹೋಯಿತು! ತನ್ನ ಸಂಗಾತಿಯನ್ನು ಮತ್ತೊಂದು ಗಂಡು ಕೆಣಕುತ್ತಿದ್ದರೂ ಸಹ, ಅದು ತನಗೆ ಸಆಂಬಂಧ ಪಡದ ವಿಷಯ ಎಂದು ಭಾವಿಸಿದಂತೆ ಸುಮ್ಮನಿತ್ತು! ಅವುಗಳ ಸಹಜ ಗುಣಗಳಾದ ಸಂಗಾತಿ ರಕ್ಷಣೆ ಹಾಗೂ ಆಕ್ರಮಣಶೀಲತೆಯನ್ನು ಮರೆತು ಹೋಗಿತ್ತು. ಈ ಪ್ರಯೋಗಗಳಿಂದ, ವ್ಯಾಸೋಪ್ರೆಸಿನ್ ಹಾರ್ಮೋನು ಜೋಡಿಗಳ ನಡುವೆ ದೀರ್ಘಕಾಲಿಕ ಅನುಬಂಧ ಏರ್ಪಡಲು ಪ್ರಮುಖ ಕಾರಣ ಎಂಬ ತೀರ್ಮಾನಕ್ಕೆ ಬಂದರು.

ಲೀಲೆ:

ಬೇಂದ್ರೆಯವರು ಪ್ರೀತಿಯ ಮೌಲ್ಯವನ್ನು ಅರಿಯಲಿ ಎಷ್ಟು ಜನ್ಮಗಳನ್ನು ಎತ್ತಿದರೂ ಸಾಲದು ಎಂದು ಹೇಳಲಿ. ಕೆ.ಎಸ್.ನ ಅವರು ದಾಂಪತ್ಯದ ನವಿರಾದ ಭಾವಗಳನ್ನು ಎಷ್ಟೇ ಸೊಗಸಾಗಿ ಕಟ್ಟಿಕೊಡಲಿ, ಕುವೆಂಪು ಅವರು ಪ್ರೇಮಕಾಶ್ಮೀರವನ್ನೇ ಧರೆಗಿಳಿಸಲಿ, ಓರ್ವ ವಿಜ್ಞಾನಿಗೆ ಪ್ರೀತಿ ಎನ್ನುವುದು ಬರೀ ಹಾರ್ಮೋನುಗಳ ಲೀಲೆ! ರಾಸಯನಿಕ ವಸ್ತುಗಳ ಜಾಲ!

ಎಲ್ಲಿಯವರೆಗೆ ನಮ್ಮ ಮಿದುಳಿನಲ್ಲಿ ಈ ರಾಸಾಯನಿಕ ವಸ್ತುಗಳು (ಹಾರ್ಮೋನುಗಳು) ಉತ್ಪಾದನೆಯಾಗುತ್ತಿದ್ದು ತಮ್ಮ ಕೆಲಸ ಕಾರ್ಯಗಳನ್ನು ಪರಿಪೂರ್ಣವಾಗಿ ನಡೆಸುತ್ತಿರುತ್ತವೆಯೋ, ಅಲ್ಲಿಯವರೆಗೆ ಅಮರ ಪ್ರೇಮ ಗಾಥೆ ಸರಾಗವಾಗಿ ಸಾಗುತ್ತಿರುತ್ತದೆ. ಈ ರಾಸಾಯನಿಕಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ಸಾಕು, ಆಗ ಪ್ರೇಮ ಮಧುರಾಕ್ಷರ...ಪ್ರೇಮ ಅಜರಾಮರ ಎನ್ನುವುದು ಸುಳ್ಳಾಗುತ್ತದೆ. ಜೋಡಿಗಳಲ್ಲಿ ಅಪಶೃತಿ ಕೇಳಿ ಬರಲಾರಂಭಿಸುತ್ತದೆ. ಆಗ ಈ ರಾಸಾಯನಿಕಗಳು ಮತ್ತೆ ಸಹಜ ಕೆಲಸ ಕಾರ್ಯ ಮಾಡುವಂತೆ ವರ್ತಿಸುವುದು ಗಂಡು-ಹೆಣ್ಣು ಇಬ್ಬರ ಕೈಯಲ್ಲಿ ಇರುತ್ತದೆ. ಹಾಗಾಗಿ ಪ್ರೇಮಿಗಳು ಪ್ರೀತಿಯ ವೈಜ್ಞಾನಿಕ ಮುಖವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಹೆತ್ತವರೂ ಸಹಾ ಹಾರ್ಮೋನುಗಳ ಲೀಲೆಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂಬ ಅಂಶವನ್ನು ಮತ್ತೆ ಒತ್ತಿ ಹೇಳಬೇಕಾಗಿಲ್ಲವಷ್ಟೆ!

ಔಷಧಿ:

ಪ್ರೀತಿ ಎನ್ನುವುದು ಹಾರ್ಮೋನುಗಳ ಲೀಲೆ ಎನ್ನುವುದನ್ನು ಒಪ್ಪೋಣ. ಈಗ ಕೆಲವು ಪ್ರಶ್ನೆಗಳು ದೈತ್ಯಾಕಾರವನ್ನು ತಳೆದು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ.

ಆಕ್ಸಿಟೋಸಿನ್ ಇಂಜಕ್ಷನ್ ನೀಡಿ, ಒಂದೇ ಒಂದು ಸಲವೂ ಸಂಭೋಗದಲ್ಲಿ ತೊಡಗದ ಇಲಿಯಲ್ಲಿ ತಾಯ್ತನದ ಭಾವವನ್ನು ವಿಜ್ಞಾನಿಗಳು ಮೂಡಿಸಿದರು.

ವೋಲ್ ದಂಪತಿಗಳಲ್ಲಿ ಗಂಡು ವೋಲಿಗೆ ವ್ಯಾಸೋಪ್ರೆಸಿನ್ ರೋಧಕ ಚುಚ್ಚು ಮದ್ದನ್ನು ನೀಡಿ ಅವುಗಳ ನಡುವಿನ ಅನುಬಂಧವನ್ನು ಸದಾ ಕಾಲಕ್ಕೂ ಮುರಿದರು.

ಮಿದುಳಲ್ಲಿ ಸೆರಟೋನ್-ನನ್ನು ಹೆಚ್ಚಿಸುವ ಗುಳಿಗೆಗಳು ಇಂದು ದೊರೆಯುತ್ತಿವೆ. ಡೋಪಮಿನ್ ಉತ್ಪಾದನೆಯನ್ನು ಹೆಚ್ಚಿಸುವ ಔಷಧಗಳೂ ಸಿಗುತ್ತಿವೆ.

ಈ ಔಷಧಗಳನ್ನು ನೀಡಿ, ಅಪ್ಪ -ಅಮ್ಮಂದಿರು ಕಾಲೇಜು ಓದುತ್ತಿರುವ ತಮ್ಮ ಮಗಳ ಮೇಲೆ ಆವರಿಸಿರುವ ಪ್ರೀತಿಯ ಭೂತವನ್ನು ಬಿಡಿಸಬಹುದೆ? ಗಂಡ-ಹೆಂಡಿರ ನಡುವೆ ಅಂತಹ ಹೊಂದಾಣಿಕೆಯಿಲ್ಲ ಎನ್ನುವವರಿಗೆ ಡೋಪಮಿನ್ ವರ್ಧಕ ಔಷಧವನ್ನು ನೀಡಿ ಅವರ ದಾಂಪತ್ಯವನ್ನು ವರ್ಧಿಸಬಹುದೆ? ಹೀಗೆ...ಪ್ರೀತಿಯ ನಾನಾ ಮುಖಗಳನ್ನು ಔಷಧಗಳಿಂದ (ಪ್ರೀತಿ ಎನ್ನುವುದು ರಾಸಾಯನಿಕ ವಸ್ತುಗಳ ಲೀಲೆ ಎಮ್ದು ನಾವೇ ಹೇಳಿದ್ದೇವಲ್ಲ!!!) ನಿಯಂತ್ರಿಸಬಹುದೆ?

ಈ ಬಗ್ಗೆ ಯಾರಾದರೂ ಸಂಶೋಧನೆಯನ್ನು ಮಾಡಿದ್ದಾರೆಯೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಈ ಲೇಖನವನ್ನು ಓದಿ, ನಮಗೂ ಈ ಔಷಧಗಳನ್ನು ಬರೆದುಕೊಡಿ ಎಂದು ದಯವಿಟ್ಟು ನನ್ನನ್ನು ಕೇಳಬೇಡಿ. ನಿಮ್ಮ ಪ್ರೀತಿ-ಪ್ರೇಮ ವರ್ಧನೆಗೆ ಇಲ್ಲವೇ ಮರ್ಧನೆಗೆ ನಾನು ಈ ಔಷಧಗಳನ್ನು ಸಲಹೆ ಮಾಡಲಾರೆ. ಏಕೆಂದರೆ, ಈ ಹಾರ್ಮೋನುಗಳ ಜೊತೆ, ಇನ್ನೂ ನಮ್ಮ ವಿಜ್ಞಾನದ ತಿಳಿವಿಗೆ ಬಾರದಂತಹ ಇನ್ನೂ ಅನೇಕ ವಿಷಯಗಳಿವೆ ಎಂಬ ಗುಮಾನಿ ನನ್ನದು. ಹಾಗಾಗಿ ಈ ಔಷಧಿಗಳನ್ನು ನಿಮ್ಮ ಮೇಲೆ ಪ್ರಯೋಗಿಸಿಕೊಳ್ಳುವ ದುಃಸಾಹಸಕ್ಕೆ ಹೋಗಬೇಡಿ.

ಗುಟ್ಟು:

ಇಬ್ಬರ ನಡುವೆ ಪ್ರೀತಿ-ಪ್ರೇಮ ಬೆಳೆಯಬೇಕೆ?

ನ್ಯೂಯಾರ್ಕಿನ ಮನಃಶಾಸ್ತ್ರಜ್ಞ ಆರ್ಥರ್ ಅರುಣ್ ಮಾಡಿದಂತಹ ಪ್ರಯೋಗವನ್ನು ನಿಮಗೆ ಹೇಳುತ್ತೇನೆ. ಇದನ್ನು ಬೇಕಾದರೆ ನೀವು ಪ್ರಯೋಗಿಸಿ ನೋಡಬಹುದು.

ಆರ್ಥರ್ ಅರುಣ್ ಅವರು ಅಪರಿಚಿತ ಯುವಕ ಯುವತಿಯರನ್ನು ಒಂದೆಡೆ ಕಲೆಹಾಕಿದರು. ನಂತರ ತಮ್ಮ ಪ್ರಯೋಗದಲ್ಲಿ ಭಾಗಿಯಾಗುವಂತೆ ಕೇಳಿಕೊಂಡರು. ನಂತರ ಅವರು ಈ ಕೆಳಗಿನ ಮೂರು ಹಂತಗಳನ್ನು ಕ್ರಮಬದ್ಧವಾಗಿ ಪಾಲಿಸುವಂತೆ ಹೇಳಿದರು.

ಮೊದಲ ಹಂತದಲ್ಲಿ ಸಂಪೂರ್ಣವಾಗಿ ಅಪರಿಚಿತವಾಗಿರುವ ವ್ಯಕ್ತಿಯನ್ನು ಭೇಟಿಯಾಗಬೇಕಾಗಿತ್ತು.

ಎರಡನೆಯ ಹಂತದಲ್ಲಿ ಇಬ್ಬರು ತಮ್ಮ ಬಗ್ಗೆ ಖಾಸಗೀ ವಿಷಯಗಳನ್ನು ಅರ್ಧ ಗಂಟೆ ಮಾತುಕತೆಯ ಮೂಲಕ ಹಂಚಿಕೊಳಬೇಕಿತ್ತು.

ಆ ನಂತರ....ಅವರಿಬ್ಬರೂ ನಿರಂತರವಾಗಿ, ಎಡೆಬಿಡದೆ, ಜಗತ್ತಿನ ಪರಿವೆಯನ್ನು ಪೂರ್ಣ ಮರೆತು, ಒಬ್ಬರ ಕಣ್ಣಲ್ಲಿ ಒಬ್ಬರು ಕಣ್ಣಿಟ್ಟು, ಪೂರ್ಣ ನಾಲ್ಕು ನಿಮಿಷಗಳ ಕಾಲ ದಿಟ್ಟಿಸಿ ನೋಡಬೇಕಿತ್ತು!

೩೪ ನಿಮಿಷಗಳ ನಂತರ....

ಆರ್ಥರ್ ಅರುಣ್ ಅವರ ಪ್ರಯೋಗದಲ್ಲಿ ಭಾಗಿಯಾಗಿದ್ದವರು, ತಾವು ಪ್ರಯೊಗದಲ್ಲಿ ಭಾಗಿಯಾಗಿದ್ದ ತಮ್ಮ ಸಂಗಾತಿಯತ್ತ ನಿಜಕ್ಕೂ ಆಕರ್ಷಿತರಾಗಿದ್ದೇವೆ ಎಂದು ಒಪ್ಪಿಕೊಂಡರು. ಒಂದು ಜೋಡಿಯಂತೂ, ಆರ್ಥರ್ ಅರುಣ್ ಅವರ ಪ್ರಯೋಗಾಲಯದಿಂದ ನೇರ ಹೊರಟು ಒಬ್ಬರನ್ನೊಬ್ಬರು ಮದುವೆಯಾದರು!
-curtsy naasomeswara

Friday, June 4, 2010

ದಾಸರ ಪದಗಳು

ಪುರಂದರ ಗುರುಂ ವಂದೇ
ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ|
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||

1. ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ
( ರಾಗ: ಬಿಲಹರಿ( ಭೀಮ್ ಪಲಾಸ್ ) ಆಟತಾಳ(ದೀಪಚಂದಿ) )
ರತುನ ದೊರಕಿತಲ್ಲ ಎನಗೆ ದಿವ್ಯ-
ರತುನ ದೊರಕಿತಲ್ಲ ||ಪ||
ರತುನ ದೊರಕಿತು ಎನ್ನ ಜನ್ಮ ಪ-
ವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು ಪ್ರ-
ಯತನವಿಲ್ಲದೆ ವಿಜಯರಾಯರೆಂಬ ||ಅ. ಪ||
ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ ಸ-
ನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ||೧||
ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿಧ್ಹ್ ವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು-
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ
ದೀನ ಜನರುದ್ಧಾರ ಗಯ್ಯುವ ||೨||
ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ||೩||



2. ಒಂದು ಬಾರಿ ಸ್ಮರಣೆ ಸಾಲದೆ
ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ
ಸರ್ವಜ್ಞರಾಯರ ಮಧ್ವರಾಯರ||
ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ||
ಆರುಮಂದಿ ವೈರಿಗಳನು ಸೇರಲೀಸದಂತೆ ಜರಿದು
ಧೀರನಾಗಿ ಹರಿಯಪಾದವ ಸೇರಬೇಕೆಂಬುವರಿಗೆ||
ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ||
ಹೀನ ಬುದ್ಧಿಯಿಂದ ಶ್ರೀಹಯವದನನ್ನ ಜರಿದು
ತಾನು ಬದುಕರಿಯಂದಿರಲು ತೋರಿ ಕೊಟ್ಟ ಮಧ್ವಮುನಿಯ||


3. ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ ||
ಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ ಪ ||
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರಪುಷ್ಕರಣಿ ಸಾನವ ಮಾಡಿ ಆ
ನಂದದಿಂದಲಿ ರಂಗನ ನೋಡದ || ೧ ||
ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ || ೨ ||
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ || ೩ ||


4. ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ
ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ
ಘೋರಪಾತಕಾಂಭುದಿಯ ಪಾರು ಮಾಳ್ಪರಾ || ಪ ||
ಮೋದ ತೀರ್ಥರ ಮತವ ಸಾಧಿಸುವರಾ
ಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ ||
ಭಾಷ್ಯತತ್ವವ ವಿಸ್ತಾರ ಮಾಳ್ಪಾರಾ
ದೋಷ ದೂರಾರಾ ಆದಿ ಶೇಷವೇಷರಾ || ೨ ||
ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾ
ನೇಮ ನಿತ್ಯರ ನಿಷ್ಕಾಮನಾಪರಾ || ೩ ||
ಮೋಕ್ಷದಾತರಾ ಅಕ್ಷೋಭ್ಯ ತೀರ್ಥರಾ
ಸಾಕ್ಷಿ ಇಪ್ಪರಾ ಅಪೇಕ್ಷೆ ರಹಿತರಾ || ೪ ||
ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರಾ
ಕುಜನ ಭಂಜರಾ ದಿಗ್ವಿಜಯ ರಾಯಾರಾ || ೫ ||
ಸೂ : ಶ್ರೀ ಜಯತೀರ್ಥರು ಶ್ರೀ ಮಧ್ವರ ಕೃತಿಗಳಿಗೆ ಟೀಕೆ ಬರೆದವರು, ಮುಂದೆ ಟೀಕಾಚಾರ್ಯರೆಂದೆ ಪ್ರಸಿದ್ಧಿಯಾದರು, ಇವರ ವೃಂದಾವನ ಗುಲಬರ್ಗಾ ಹತ್ರ ಮಳಖೇಡದಲ್ಲಿ ಕಾಗಿನ ತೀರದಲ್ಲಿ ಇದೆ.


5. ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ
ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ
ನಂದದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ
ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವನು ಕುಟ್ಟಿ
ಉರಗ ಬಂಧದಿಂದ ಕಪಿವರ್ಯಾರು ಮೈ ಮರಿಯೆ
ಗಿರಿಯ ಸಂಜೀವನವ ತಂದು ಬದುಕಿಸಿದ
ಧುರದಲಿ ದುರ್ಯೋಧನನ ಬಲವನು ತಿಳಿದೆ
ಅರಿತು ದುಷ್ಯಾಸನನ ಒಡಲನು ಬಗಿದೆ
ಉರವ ತಪ್ಪಿಸಿ ಕೌರವನ ತೊಡೆಗಳ ಮುರಿದೆ
ಹರಿಯ ಕಿಂಕರ ದುರಂಧರಗಾರು ಸರಿಯೆ
ಕಲಿಯುಗದ ಬಲು ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿ
ಕಲಿಯನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀ ಕೃಷ್ಣ ಪರನೆಂದೆ
6. ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣಿ ತರ೦ಗ ಮುನಿಕುಲೋತ್ತು೦ಗ ಪೇಳಮ್ಮ
ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ
ಸುಲಲಿತಕಮ೦ಡಲದ೦ಡವನ್ನೆ ಧರಿಸಿಹನು ಪೇಳಮ್ಮಯ್ಯ
ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ || ೧ ||
ಸು೦ದರಚರಣರವಿಂದ ಸುಭಕುತಿಯಲಿ೦ದ ಪೇಳಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಸುರರಿಂದ ಪೇಳಮ್ಮಯ್ಯ
ಚ೦ದದಿಲ೦ಕೃತಿಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸಘದಿಂದ ರಹಿತನೆ || ೨ ||
ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವ೦ದಿತರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇ೦ದ್ರಯತಿ ಅಬುಜ ಭವಾ೦ಡದೊಳು ಪ್ರಬಲ ಕಾಣಮ್ಮ || ೩ ||

7. ಕೈಲಾಸ ವಾಸ
ರಾಗ : ಕಾಂಬೋದಿ ತಾಳ : ಖಂಡಛಾಪು
ಕೈಲಾಸವಾಸ ಗೌರೀಶ ಈಶಾ..
ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ... ಶಂಭೋ..... ||
ಅಹೋರಾತ್ರಿಯಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ..
ಅಹಿಭೂಷಣನೆ ಎನ್ನ ಅವಗುಣಗಳೆಣಿಸದೆಲೆ
ವಿಹಿತ ಧರ್ಮದಿ ನಿಜ ವಿಷ್ಣು ಭಕುತಿಯನೆ ಕೊಡೊ ಶಂಭೋ... ||೧||
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲಾ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ...
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಳ್ಪೆ
ಮನವು ನರಹರಿಯ ಚರಣದೊಳಗಿಡೋ ಶಂಭೋ.... ||೨||
ಭಾಗೀರಥೀಧರನೆ ಭಯವ ಪರಿಹರಿಸಯ್ಯಾ
ಲೇಸಾಗಿ ಒಲಿದೂ ಸಂತಸಸರ್ವ ದೇವಾ
ಭಾಗವತಗಳ ಪ್ರಿಯ ವಿಜಯವಿಠಲನಂಘ್ಹ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡೊ ಶಂಭೋ...||೩||

8. ಸದಾ ಎನ್ನ ಹೃದಯದಲ್ಲಿ.........
ರಾಗ : ದರ್ಬಾರ್ ಕಾನಡ ತಾಳ : ರೂಪಕ
ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ..
ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ.....
ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ...
ವೇಣುಗಾನ ಲೋಲನ ಕುಳ್ಳಿರಿಸಿ
ಙ್ಞಾನದಿಂದ ಭಜಿಸುವೇನೋ..... || ಸದಾ...||
ಭಕ್ತಿರಸವೆಂಬೋ...ಮುತ್ತು ಮಾಣಿಕ್ಯದಾ..
ಹರಿವಾಣದೀ....
ಮುಕ್ತನಾಗಬೇಕು ಎಂದು
ಮುತ್ತಿನ ಆರತಿ ಎತ್ತುವೇನೋ.......... || ಸದಾ..||
ನಿನ್ನ ನಾನು ಬಿಡುವನಲ್ಲ...
ಎನ್ನ ನೀನು ಬಿಡಲು ಸಲ್ಲ.......
ಘನ್ನ ಮಹಿಮ ವಿಜಯ ವಿಠಲ...
ನಿನ್ನ ಭಕುತರ ಕೇಳೋ ಸಲ್ಲ......... || ಸದಾ...||


9. ದಾಸನಾಗೋ ನೀ ಶಿಷ್ಯನಾಗೋ
(ರಾಗ ಕಾಂಭೋಜ ಏಕತಾಳ)
ದಾಸನಾಗೋ ನೀ ಶಿಷ್ಯನಾಗೋ ||ಪ||
ಏಸು ಕಾರ್ಯಂಗಳ (ಕಾಯಂಗಳ ?) ಕಳೆದು ಎಂಭತ್ತು -
ನಾಲ್ಕು ಲಕ್ಷ ಜೀವರಾಶಿಯನ್ನೆ ದಾಟಿ ||ಅ||
ಆಶಾಪಾಶ ಎಂಬೋ ಪರಮಾಬ್ಧಿಯೊಳಗೆ ಮುಳುಗಿ ಮಾಯಾ-
ಪಾಶಕ್ಕೊಳಗಾಗದೇ ಮಾನ್ಯನಾಗೊ , ನೀ ಧನ್ಯನಾಗೊ ||
ಮಾಯದ ಗೂಡಿಗೆ ಸಿಕ್ಕಿ ಘಡಿಘಡಿಘಡಿಸುತ್ತ ರಘು-
ರಾಮನೆಂಬೊ ವಸ್ತುವನ್ನು ಚೆನ್ನಾಗಿ ನಂಬೊ , ನೀನಾಗಿ ನಂಬೊ ||
ಈಗಲೋ ಆಗಲೋ ಇನ್ಯಾವಗಾಗಲೋ ಈ ಸಂಸಾರ
ಹೋಗುವ ಜೀವಕ್ಕೆ ನಿನಗೆ ತಂದೆ ಯಾರೊ , ತಾಯಿ ಯಾರೊ ||
ಇತ್ತಲೋ ಅತ್ತಲೋ ಇನ್ನೆತ್ತಲೋ ಈ ಸಂಸಾರ
ಮೃತ್ಯು ಇದು ನಿತ್ಯವೆಂದು ನಂಬಬೇಡೊ , ನೀ ನಂಬಬೇಡೊ ||
ಸೋರೆಯೊಳಗೆ ಮದ್ಯವ ತುಂಬಿ ಮೇಲೆ ಗಂಧಾಕ್ಷತೆ ಹಚ್ಚಿ
ಮೇಲೆ ಹುವ್ವಿನ ಸರವನೆ ಧರಿಸಿದಂತೆ , ನೀ ಮರೆಸಿದಂತೆ ||
ಮೂರುಬಾರಿ ಶರಣು ಮಾಡಿ ನೀರವೊಳಗೆ ಮುಳುಗಿ
ಪರನಾರೇರ ಮನಕ್ಕೆ ಸೆರೆಯ ಮಾಡಿ , ನೀ ಗುರಿಯ ಮಾಡಿ ||
ನಾರಾಯಣ ಅಚ್ಯುತ ಅನಂತ ಕೇಶವ ಕೃಷ್ಣನ್ನ ನಂಬಿ ಭಜಿಸೊ
ಪುರಂದರವಿಠಲನ ಲಂಡ ಜೀವವೆ , ನೀ ಭಂಡ ಜೀವವೆ ||


10. ಕುರುಡು ನಾಯಿ ತಾ ಸಂತೆಗೆ ಬಂತಂತೆ
(ರಾಗ ಪೂರ್ವಿ ಆದಿತಾಳ)
ಕುರುಡು ನಾಯಿ ತಾ ಸಂತೆಗೆ ಬಂತಂತೆ
ಅದು ಏತಕೆ ಬಂತೋ ||ಪ||
ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ ||
ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ
ಮರೆತರಿನ್ನು ವ್ಯರ್ಥವಂತೆ
ನರಕದೊಳಗೆ ಬಿದ್ದಿತಂತೆ ||
ವೇದವಾದಗಳನೋದಿತಂತೆ
ಗಾದೆ ಮಾಡಿ ಬಿಟ್ಟಿತಂತೆ
ಹಾದಿ ತಪ್ಪಿ ನಡೆದು ಯಮನ
ಬಾಧೆಗೆ ತಾ ಗುರಿಯಾಯಿತಂತೆ ||
ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ
ಕಾನನಕಾನನ ತಿರುಗಿತಂತೆ
ತಾನು ತನ್ನನೆ ಮರೆಯಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ
ರಂಗ ಪುರಂದರವಿಠಲನ ಮರೆತು
ಭಂಗ ಬಹಳ ಪಟ್ಟಿತಂತೆ ||


11. ತಾಳುವಿಕೆಗಿಂತ ತಪವು ಇಲ್ಲ
ತಾಳುವಿಕೆಗಿಂತ ತಪವು ಇಲ್ಲ
ಕೇಳಬಲ್ಲವರಿಗೆ ಹೇಳುವೆನು ಸೊಲ್ಲ|
ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೆ ತಾಳು|
ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು||
ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು
ಸುಳಿನುಡಿ ಕುಹಕ ಕುಮಂತ್ರವನು ತಾಳು|
ಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನ್ನು ಹೃದಯದಿ ತಾಳು||
ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು|
ಉಕ್ಕೋ ಹಾಲಿಗೆ ನೀರನಿಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು||


12. ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ
( ರಾಗ ಶಂಕರಾಭರಣ ಅಟ ತಾಳ)
ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ || ಪ ||
ಭಾಗವತರು ಕಂಡರೆತ್ತಿಕೊಂಡೊಯ್ವರೊ ||ಅ ||
ಸುರ ಮುನಿಗಳು ತಮ್ಮ ಹೃದಯಗಹ್ವರದಲ್ಲಿ
ಪರಮಾತ್ಮನ ಕಾಣದೆ ಅರಸುವರೊ
ದೊರಕದ ವಸ್ತುವಿಂದು ದೊರಕಿದು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರು ||
ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗುಲಿತು ಕರಕೆಂದು
ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ ||
ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ಹಿಂದೆ ತಿರುಗುವರೊ
ಸೃಷ್ಟೀಶ ಪುರಂದರವಿಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೋ ರಂಗಯ್ಯ ||


13. ನಂಬಿದೆ ನಿನ್ನ ಪಾದವ
(ರಾಗ ನವರೋಜ್ ಆದಿ ತಾಳ )
ನಂಬಿದೆ ನಿನ್ನ ಪಾದವ, ವೆಂಕಟರಮಣ
ನಂಬಿದೆ ನಿನ್ನ ಪಾದವ ||ಪ||
ನಂಬಿದೆ ನಿನ್ನ ಪಾದಾಂಬುಜಯುಗಳವ
ಚಂದದಿ ಸಲಹೋ ಮಂದರಧರನೆ ||ಅ||
ತಂದೆಯಾಗಿ ನೀನೇ ತಾಯಿಯು ನೀನೇ
ಬಂಧುಬಳಗವು ನೀನೆ
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ಬಂದೆನ್ನ ಸಲಹೋ ಮುಕುಂದಮುರಾರಿ ||
ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ||
ಮರೆತು ಮಾಯದೊಳು ಮುಳುಗಿದೆ ಮಾಯ-
ವರಿತು ಅರಿಯದಾದೆ
ಮರೆಯದೆ ಎನ್ನನು ಸಲಹೊ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರವಿಠಲ ||


14. ಪವಮಾನ ಪವಮಾನ ಜಗದ ಪ್ರಾಣ
ರಾಗ: ತೋಡಿ ತ್ರಿವಿಡಿ ತಾಳ
ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|
ಹೇಮ ಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು
ವಜ್ರ ಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ
ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ
ಪ್ರಾಣ ಅಪಾನ ವ್ಯಾನೋದಾನ ಸಮಾನ
ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ
ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ


15. ಧವಳ ಗಂಗೆಯ ಗಂಗಾಧರ ಮಹಾಲಿಂಗ
ರಾಗ: ಮೋಹನ ತಾಳ: ಝಂಪಾ
ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರೋ ಗುರುಕುಲೋತ್ತುಂಗಾ
ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವಾ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಚುತಗಲ್ಲದ ಅಸುರರ ಬಡಿವಾ
ಮಾರನ ಗೆದ್ದ ಮನೋಹರ ಮೂರ್ತಿ
ಸಾಧು ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ
ಮುರಾರಿಯ ತೋರಿಸಯ್ಯ ನಿಮಗೆ ಶರಣಾರ್ಥಿ
ಚನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀ ಎನ್ನ
ಅನ್ಯವಲ್ಲವೊ ನಾನು ಗುರುವೆಂಬೆ ನಿನ್ನ
ಇನ್ನಾದರೂ ತೋರೋ ಧೀರ ಮುಕ್ಕಣ್ಣ


16. ಕೈಲಾಸವಾಸ ಗೌರೀಶ ಈಶ
ರಚನೆ -ವಿಜಯದಾಸರು
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ||
ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ
ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡೊ, ಶಂಭೋ ||೧||
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಆನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ದನುಜ ಗಜ ಮದಹಾರಿ ದಂಡ ಪ್ರಣಾಮವ ಮಾಳ್ಪೆ
ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ, ಶಂಭೋ ||೨||
ಭಾಗೀರಥಿ ಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಶರ್ವ ದೇವ
ಭಾಗವತ ಜನ ಪ್ರಿಯ ವಿಜಯವಿಠಲನಂಘ್ರಿ
ಜಾಗು ಮಾಡದೆ ಭಜಿಪ ಭಾಗ್ಯವನು ಕೊಡೊ, ಶಂಭೋ ||೩||


17. ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ
ಸದಾ ಎನ್ನ ಹೃದಯದಲ್ಲಿ
ವಾಸಮಾಡೊ ಶ್ರೀಹರಿ ||ಪಲ್ಲವಿ||
ನಾದಮೂರ್ತಿ ನಿನ್ನ ಪಾದ
ಮೋದದಿಂದ ಭಜಿಸುವೆನು ||ಅನು||
ಜ್ಞಾನವೆಂಬ ನವರತ್ನದ
ಮಂಟಪದ ಮಧ್ಯದಲಿ
ವೇಣುಲೋಲನ ಕುಳ್ಳಿರಿಸಿ
ಮೋದದಿಂದ ಭಜಿಸುವೆನು ||೧||
ಭಕ್ತಿ ರಸವೆಂಬ ಮುದ್ದು
ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು
ಮುತ್ತಿನಾರತಿ ಎತ್ತುವೆನು ||೨||
ನಿನ್ನ ನಾನು ಬಿಡುವನಲ್ಲ
ಎನ್ನ ನೀನು ಬಿಡಲು ಸಲ್ಲ
ಘನ್ನ ಮೂರುತಿ ವಿಜಯವಿಠಲ
ಕೇಳೊ ನಿನ್ನ ಭಕ್ತರ ಸೊಲ್ಲ ||೩||


18. ಕಂಡೆ ನಾ ಗೋವಿಂದನ
(ರಾಗ ಪಂತುವರಾಳಿ ಅಟತಾಳ )
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ||ಪ ||
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ ||
ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲವಂದ್ಯನ
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ ||
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತರಕ್ಷಕನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ ||


19. ಇದು ಭಾಗ್ಯವಿದು ಭಾಗ್ಯವಿದು
(ರಾಗ ಕಾಂಭೋಜ ಝಂಪೆ ತಾಳ)
ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ ||ಪ||
ಪದುಮನಾಭನ ಪಾದಭಜನೆ ಸುಖವಯ್ಯ ||ಅ||
ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ ||
ಬುದ್ಧಿಯೊಳು ತನುಮನವ ತಿದ್ದಿಕೊಳ್ಳಲುಬೇಕು
ಮುದ್ದಾಗಿರಬೇಕು ಮುನಿಯೋಗಿಗಳಿಗೆ
ಮಧ್ವಮತಾಬ್ಧಿಯೊಳು ಮೀನಾಗಿರಲುಬೇಕು
ಶುದ್ಧನಾಗಿರಬೇಕು ಕರಣತ್ರಯಗಳಲಿ ||
ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು
ನಿಶಿಹಗಲು ಶ್ರೀಹರಿಯ ನೆನೆಯಬೇಕು
ವಸುಧೇಶ ಪುರಂದರವಿಠಲರಾಯನ
ಹಸನಾದ ದಾಸರ ಸೇವಿಸಲುಬೇಕು ||

ಗೆಲುವು

’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.

ಗೆಲುವು ಎಂಬುದು ಒಂದು ಕೊನೆಯಲ್ಲ, ಒಂದು ಗೋಲ್ ಅಲ್ಲ, ಹತ್ತಿನಿಂದ ಬೆಟ್ಟವಲ್ಲ. ಅದು ನಿರಂತರವಾಗಿ ಸಾಗುತ್ತಾ ಹೋಗುವಂತಹದು. ಅದಕ್ಕೆ ಕೊನೆಯೇ ಇಲ್ಲ. ಅದಕ್ಕೆ ಕೊನೆಯೇ ಇಲ್ಲ. ಮನುಷ್ಯ ಗೆಲುವಿನಿಂದ ಗೆಲುವಿಗೆ ನಡೆಯತ್ತ ಹೋಗಬೇಕು. ಗೆದ್ದ ಮನುಷ್ಯ ಹೋಗುತ್ತಿರುತ್ತಾನೆ. ಗೆಲ್ಲಲಾಗದವನು ಅದೃಷ್ಟಕ್ಕಾಗಿ ಕಾಯುತ್ತಾ ಕೊತಿರುತ್ತಾನೆ. ಮೊದಲಿನವನು ಅಡೆತಡೆಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುತ್ತಾನೆ. ಇನ್ನೊಬ್ಬ ಎಲ್ಲಿಯೂ ತಲುಪದೆ ನಿಂತಲ್ಲೇ ಗಿರಕಿ ಹೊಡೆಯುತ್ತಿರುತ್ತಾನೆ. ಇಬ್ಬರಿಗೂ ಕೆಲವು ವ್ಯತ್ಯಾಸಗಳಿವೆ. ಅಸಾಮಾನ್ಯ ಅನ್ನಿಸಿಕೊಂಡ ಮನುಷ್ಯ ಅವಕಾಶಗಳಿಗಾಗಿ ಎದುರು ನೋಡುತ್ತಿರುತ್ತಾನೆ., ಸಿದ್ಧನಾಗುತ್ತಿರುತ್ತಾನೆ. ಸಾಮಾನ್ಯ ಮನುಷ್ಯ ತನ್ನ ಸೇಫ್ಟಿ ನೋಡಿಕೊಂಡು ಬೆಚ್ಚಗೆ ಉಳಿದುಬಿಡುತ್ತಾನೆ.

ನೀವು ಇತಿಹಾಸವನ್ನೇ ನೋಡಿ, ಅಲ್ಲೆಲ್ಲೋ ಅಲೆ ಕ್ಝಾಂಡರ್‍ ಇದ್ದಾನೆ. ತಾಮರ್‍ಲೆನ್ ಇದ್ದಾನೆ. ಎಲ್ಲರೂ ಗೆಲುವಿನ ರುಚಿ ಕಂಡವರೆ. ಇವರೆಲ್ಲರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡಿದಾಗ, ಎಲ್ಲರಲ್ಲೂ ಕೆಲವು ಕಾಮನ್ ಕ್ವಾಲಿಟಿಗಳಿದ್ದವು. ಅನಿಸುತ್ತದೆ. ಅವರು ಬದುಕಿದ್ದ ಕಾಲ ಯವುದೇ ಇರಲಿ. ಆಗುಣಗಳು ಮಾತ್ರ ಕಾಮನ್ನಾಗಿ ಇಲ್ಲರಲ್ಲೂ ಇರುತ್ತವೆ. ಆಗುಣಗಳನ್ನು ತಕ್ಷಣ ಅರ್ಥ ಮಾಡಿಕೊಳ್ಳಿ. ಅವುಗಳನ್ನು ನಿಮ್ಮವನ್ನಾಗಿ ಮಾಡಿಕೊಳ್ಳಿ. ಗೆಲುವು ಎಂಬುದು ಆನೆಯಂತಹುದು. ಅದು ಹೋದಲ್ಲೆಲ್ಲ ಹೆಜ್ಜೆ ಗುರುತು ಬಿಟ್ಟಿರುತ್ತದೆ. ಆಜಾಡು ಗಮನಿಸಿ. ಸೋಲು ಕೂಡ ಆನೆಯಂತಹುದೇ. ಅದೂ ಹೆಜ್ಜೆ ಜಾಡು ಬಿಟ್ಟಿರುತ್ತದೆ. ಅಂಥ ಗೆಲು ಗೆದ್ದ ಬಾಬರನನ್ನು ನೋಡುತ್ತೇವೆ. ಮರು ಘಳಿಗೆಯಲ್ಲೇ ದೊಡ್ಡ ಮಟ್ಟದಲ್ಲಿ ಅಸಫಲತೆಯನ್ನು ಕಂಡ ಹುಮಾಯೂನ ನನ್ನು ನೋಡುತ್ತೇವೆ. ಹುಮಾಯೂನನ ಬಲಹೀನತೆಗಳು ಏನಿದ್ದವು ಎಂಬುದನ್ನು ತಕ್ಷಣ ತಿಳಿದುಕೊಳ್ಳಿ. ಅವುಗಳನ್ನು ಅವೈಡ್ ಮಾಡಿ. ಬಾಬರನ ಗಟ್ಟಿತನ ನಿಮ್ಮದಾಗಲಿ. ಸೋಲು ನಿಮ್ಮನ್ನು ಹೆದರಿಸುವುದಿಲ್ಲ.

ಇಷ್ಟಕ್ಕೂ ಗೆಲುವೆಂಬುದು ಬಹಳ ನಿಘೂಡತೆಯೇ ಅಲ್ಲ. ಅದರಲ್ಲಿ ರಹಸ್ಯವೆಂಬ ಮಣ್ಣಂಗಟ್ಟಿಯೂಇಲ್ಲ. ಕೆಲುವು ಮೂಲಭೂತ ಸೂತ್ರಗಳಿರುತ್ತವೆ. ಅವುಗಳನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತಾ ಹೋಗುವುದೇ ಗೆಲುವಿನ ಗುಟ್ಟು. ಸೋಲು ಕೂಡ ಅಷ್ಟೆ. ಸೋತ ಮನುಷ್ಯ ದುರದ್ರುಷ್ಟವಂತನಾಗಿರುವುದಿಲ್ಲ. ಅವನು ಪ್ರತೀಸಲ ಮಾಡಿದತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಕೆಲುವರಿಗೆ ’ಗೆಲುವು’ ಅಂದರೇನು ಎಂಬ ಬಗ್ಗೆಯೇ ಗೊಂದಲವಿರುತ್ತದೆ. ಕೆಲವರ ಮಟ್ಟಿಗೆ ದುಡ್ಡೇ ಗೆಲುವು. ದುಡ್ಡು ಸಂಪಾದಿಸಿದ ಮನುಷ್ಯನೇ ಯಶಸ್ವಿ ಮನುಷ್ಯ ಅಂದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಸಾಮಾಜಿಕ ಮನ್ನಣ್ಣೆ ಬೇಕು. ದೊಡ್ಡ ಹೆಸರು ಮಾಡಿದವರೇ ಯಶಸ್ವಿ ಪುರುಷರು ಅಂದುಕೊಳ್ಳುತ್ತಾರೆ. ಒಳ್ಳೆಯ ಆರೋಗ್ಯ, ಚೆಂದನೆಯ ಕುಟುಂಬ, ಸಮಾಧಾನ, ಸಂತೋಷ. ಮನಸ್ಸಿನ ನೆಮ್ಮದಿ ಇದ್ದರೆ ಅದೇ ಗೆಲುವು ಅಂದುಕೊಳ್ಳುತ್ತಾರೆ. ಎಲ್ಲವೂ ನಿಜವಿರಬಹುದು. ಇವೆಲ್ಲ ಅಲ್ಲದೆ ಇನ್ನೆನ್ನೋ ಆಗಿರಲೂ ಬಹುದು. ಈ ಕ್ಷಣಕ್ಕೆ ಮಹಾನ್ ಗೆಲುವು ಅನ್ನಿಸಿದ್ದು ಮಾರನೆಯ ನಿಮಿಷಕ್ಕೆ ಏನೂ ಅಲ್ಲ ಅಂತ ಅನ್ನಿಸಿ ಬಿಡಲೂಬಹುದು ಆದರೆ ಕರಾರುವಕ್ಕಾಗಿ ಹೇಳುವುದಾದರೆ, ಗೆಲುವು ಎಂಬುದು ನಾವು ನಿರಂತರವಾಗಿ ಚೇಸ್ ಮಾಡುತ್ತಾ, ಗೆಲ್ಲುತ್ತಾ, ತಲುಪುತ್ತಾ ಹೋಗುವ ಅರ್ಥಪೂರ್ಣ ಗುರಿ.

ಹೇಳಿದೆನಲ್ಲ, ಗೆಲುವೆಂಬುದು ನಿರಂತರ ಪಯಣ. ಅಲ್ಲಿ ಖಾಯಂ ಆದ ಕೊನೆಯ ನಿಲ್ದಾಣವೆಂಬುದೇ ಇಲ್ಲ. ಅಂಥದೊಂದು ನಿಲುಗಡೆಗೆ ನಾವು ತಲುಪುವುದೂ ಇಲ್ಲ. ಒಂದು ನಿಲ್ದಾಣ ತಲುಪಿದ ಕೂಡಲೇ ಮತ್ತೊಂದು ನಿಲ್ದಾಣಕ್ಕೆ ಹೋಗಬೇಕು. ಒಂದು ನಿಲ್ದಾಣವನ್ನು ತಲುಪಿದಾಗ ಆಗುವ ಸಂತೋಷವೇ ಒಂದು ಅನುಭೂತಿ. ಅದನ್ನು ಒಳಗಿನಿಂದ ಫೀಲ್ ಮಾಡಬೇಕೇ ಹೊರತು ಬಾಹ್ಯ ಜಗತ್ತು ನಮಗೆ ಅದರ ಅನುಭವವನ್ನು ವಿವರಿಸಲಾರದು. ಹಾಗೇ ನಿಲ್ಧಾಣಗಳನ್ನು ದಾಟುತ್ತ, ದಾಟುತ್ತ ನಾವು ಹೋಗುತ್ತಿರುವುದು ಸರಿಯಾದ ಗಮ್ಯದ ಕಡೆಗೇನಾ? ಅದು ಆರೋಗ್ಯಕರ ಗಮ್ಯವೇನಾ? ಪಾಸಿಟೀವ್ ಆಗಿದೆಯಾ? ಕೇಳಿಕೊಳ್ಳಬೇಕು. ಪ್ರಯಾಣದಲ್ಲೇ ನಮಗದು ಗೊತ್ತಾಗಿ ಹೋಗುತ್ತದೆ. ಸರಿಯಾದ ದಾರಿಯಾಗಿದ್ದರೆ ನಾವಾಗಲೇ ಒಂದು ದುವ್ಯ ಅನುಭೂತಿಗೆ ಒಳಗಾಗಿರುತ್ತೇವೆ. ಅಂಥ ದಿವ್ಯಾನುಭೂತಿ ನಿಮಗೆ ಆಗದಿದ್ದರೆ, ನಿಮ್ಮ ಗೆಲುವು ನಿರರ್ಥಕ.

ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂದಮಟ್ಟಿಗೆ ಅದು ಗೆಲುವಲ್ಲ. ಒಪ್ಪಿಕೊಳ್ಳದವರೂ ಅನೇಕರಿರಬಹುದು. ಇವತ್ತಿನ ನನ್ನ ಅಛೀವ್‌ಮೆಂಟ್‌ಗಳನ್ನು ’ಆಹಾ’ ಅಂತ ಮೆಚ್ಚಿ ಹೊಗಳುವ ಮೂರ್ಖರಿಗಿಂತ, ನನ್ನ ಗೆಲುವನ್ನು ಗೆಲುವೇ ಅಲ್ಲವೆಂದು ಗೇಲಿ ಮಾಡುವ ಬುದ್ದಿವಂತರು ನನಗೆ ಇಷ್ಟವಾಗುತ್ತಾರೆ. ಆದರೆ ಗೆಲುವು ಮತ್ತು ಸಂತೋಷಗಳೆರಡೂ ಕೈ ಕೈ ಹಿಡಿದು ನಡೆಯುತ್ತವೆ. ಗೆದ್ದ ಮನುಷ್ಯನಿಗೆ, ತಾನು ಕೇವಲ ಉಸಿರಾಡುತ್ತಿಲ್ಲ: ಬದುಕಿದ್ದೇನೆ ಅಂತ ಗೊತ್ತಾಗುತ್ತಿರುತ್ತದೆ. ಅದು ಕೇವಲ ಸ್ಪರ್ಷವಲ್ಲ. ಅನುಭೂತಿ ಅನ್ನಿಸುತ್ತಿರುತ್ತದೆ. ಆತ ಯಾವುದನ್ನೂ ಸುಮ್ಮನೆ ನೋಡುವುದಿಲ್ಲ: ಗಮನಿಸುತ್ತಿರುತ್ತಾನೆ.ಕೇವಲ ಓದುವುದಿಲ್ಲ. ಓದಿದ್ದು ಆತನಲ್ಲಿ ಮಿಳಿತವಾಗುತ್ತಿರುತ್ತದೆ. ಆತ ಕೇವಲ ಕೇಳುವುದಿಲ್ಲ: ಆಲಿಸುತ್ತಿರುತ್ತಾನೆ. ಅರ್ಥ ಮಾಡಿಕೊಳ್ಳುತ್ತಿರುತ್ತಾನೆ. ಗೆಲುವೆಂದರೆ, ಇವೆಲ್ಲವುಗಳ ಸಮಾಗಮ.

ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಒಬ್ಬ ಮನುಷ್ಯ ಸೋಲುತ್ತಿದ್ದಾನೆ ಅಂದರೆ ಆತ ದುರದೃಷ್ಟವಂತ ಅನ್ನುತ್ತೀರಾ? ಖಂಡಿತ ಇಲ್ಲ. ಆತನಿಗೇ ಗೊತ್ತಿಲ್ಲದೆ ಆತನನ್ನು ಅನೇಕ ಸಂಗತಿಗಳು ಕೈಹಿಡಿದು ಜಗ್ಗುತ್ತಿರುತ್ತವೆ. ಅಹಂಕಾರವೊಂದೇ ಸಾಕು; ಅದು ಗೆಲುವಿನ ಮೊದಲ ಶತ್ರು . ಸೋತೇನೆಂಬ ಭಯ, ಆತ್ಮ ನಿಂದನೆ, ಕೀಳರಿಮೆ, ಸರಿಯಾದ ಪ್ಲಾನ್ ಇಲ್ಲದಿರುವುದು, ಖಚಿತವಾದ ಗೋಲ್‌ಗಳಿಲ್ಲದಿರುವುದು, ಮಾಡಬೇಕು ಎಂದುಕೊಂಡ ಕೆಲಸಗಳನ್ನು ಮುಂದಕ್ಕೆ ಹಾಕುತ್ತಾ ಹೋಗುವುದು, ಮನೆ ಮಂದಿಯೆಲ್ಲರ ಜವಾಬ್ದಾರಿಯನ್ನು ಹೊತ್ತು ಬಿಡುವುದು, ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾದ್ಯವಾಗದೇ ಹೋಗುವುದು, ಚಿಕ್ಕ ಪುಟ್ಟ ಲಾಭಗಳಿಗಾಗಿ ದೊಡ್ಡ ಮಟ್ಟದ ದೂರದರ್ಶಿತ್ವ ಕಳೆದುಕೊಳ್ಳುವುದು, ಪ್ರತಿಯೊಂದನ್ನೂ ತಾನೇ ಮಾಡುತ್ತಾ ಹೋಗುತ್ತೇನೆನ್ನುವುದು, ಕಮಿಟ್‌ಮೆಂಟೇ ಇಲ್ಲದಿರುವುದು, ಸರಿಯಾದ ತರಬೇತಿ ಇಲ್ಲದೇ ಹೋಗುವುದು, ಹಿಡಿದ ಕೆಲದ ಮುಗಿಸಿ ತೀರುತ್ತೇನೆ ಎಂಬ ಹಟದ ಕೊರತೆ, ಯಾವುದನ್ನು ಮೊದಲು ಮಾಡಬೇಕು ಎಂಬ ಪರಿಜ್ಞಾನವಿಲ್ಲದಿರುವುದು-ಇವೆಲ್ಲವೂ ಒಬ್ಬ ಮನುಷ್ಯನನ್ನು ಗೆಲುವಿನಿಂದ ಹೊಂದಕ್ಕೆ ಎಳೆದುಬಿಡುತ್ತವೆ.

(ರವಿ ಬೆಳಗೆರೆಯವರ ಜೋಳಿಗೆಯಿಂದ ಕದ್ದದ್ದು)

ಚಾನುಕ್ಯನ ನುಡಿಮುತ್ತುಗಳು

Chanakya

Once you start a working on something, don't be afraid of failure and don't abandon it. People who work sincerely are the happiest.

A good wife is one who serves her husband in the morning like a mother does, loves him in the day like a sister does and pleases him like a prostitute in the night.


A man is born alone and dies alone; and he experiences the good and bad consequences of his karma alone; and he goes alone to hell or the Supreme abode.


A man is great by deeds, not by birth.


A person should not be too honest. Straight trees are cut first and honest people are screwed first.


As a single withered tree, if set aflame, causes a whole forest to burn, so does a rascal son destroy a whole family.


As long as your body is healthy and under control and death is distant, try to save your soul; when death is immanent what can you do?


As soon as the fear approaches near, attack and destroy it.


Before you start some work, always ask yourself three questions - Why am I doing it, What the results might be and Will I be successful. Only when you think deeply and find satisfactory answers to these questions, go ahead.


Books are as useful to a stupid person as a mirror is useful to a blind person.


Do not be very upright in your dealings for you would see by going to the forest that straight trees are cut down while crooked ones are left standing.


Do not reveal what you have thought upon doing, but by wise council keep it secret being determined to carry it into execution.

Education is the best friend. An educated person is respected everywhere. Education beats the beauty and the youth.


Even if a snake is not poisonous, it should pretend to be venomous.


God is not present in idols. Your feelings are your god. The soul is your temple.


He who is overly attached to his family members experiences fear and sorrow, for the root of all grief is attachment. Thus one should discard attachment to be happy.


He who lives in our mind is near though he may actually be far away; but he who is not in our heart is far though he may really be nearby.


If one has a good disposition, what other virtue is needed? If a man has fame, what is the value of other ornamentation?


It is better to die than to preserve this life by incurring disgrace. The loss of life causes but a moment's grief, but disgrace brings grief every day of one's life.


Never make friends with people who are above or below you in status. Such friendships will never give you any happiness.


O wise man! Give your wealth only to the worthy and never to others. The water of the sea received by the clouds is always sweet.


One whose knowledge is confined to books and whose wealth is in the possession of others, can use neither his knowledge nor wealth when the need for them arises.


Purity of speech, of the mind, of the senses, and of a compassionate heart are needed by one who desires to rise to the divine platform.


Test a servant while in the discharge of his duty, a relative in difficulty, a friend in adversity, and a wife in misfortune.


The biggest guru-mantra is: never share your secrets with anybody. It will destroy you.

The earth is supported by the power of truth; it is the power of truth that makes the sun shine and the winds blow; indeed all things rest upon truth.


The fragrance of flowers spreads only in the direction of the wind. But the goodness of a person spreads in all direction.


The happiness and peace attained by those satisfied by the nectar of spiritual tranquillity is not attained by greedy persons restlessly moving here and there.


The life of an uneducated man is as useless as the tail of a dog which neither covers its rear end, nor protects it from the bites of insects.


The one excellent thing that can be learned from a lion is that whatever a man intends doing should be done by him with a whole-hearted and strenuous effort.


The serpent, the king, the tiger, the stinging wasp, the small child, the dog owned by other people, and the fool: these seven ought not to be awakened from sleep.


The wise man should restrain his senses like the crane and accomplish his purpose with due knowledge of his place, time and ability.


The world's biggest power is the youth and beauty of a woman.


There is no austerity equal to a balanced mind, and there is no happiness equal to contentment; there is no disease like covetousness, and no virtue like mercy.


There is poison in the fang of the serpent, in the mouth of the fly and in the sting of a scorpion; but the wicked man is saturated with it.


There is some self-interest behind every friendship. There is no friendship without self-interests. This is a bitter truth.


Treat your kid like a darling for the first five years. For the next five years, scold them. By the time they turn sixteen, treat them like a friend. Your grown up children are your best friends.


We should not fret for what is past, nor should we be anxious about the future; men of discernment deal only with the present moment.


Whores don't live in company of poor men, citizens never support a weak company and birds don't build nests on a tree that doesn't bear fruits.
Chanakya